Monday, July 27, 2026
Monday, July 27, 2026

ಪ್ರಯಾಣ ದಾಖಲೆಗಳಿಲ್ಲದೆ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಬೇಡಿ: ವಿದೇಶಾಂಗ ಸಚಿವಾಲಯ

ಪ್ರಯಾಣ ದಾಖಲೆಗಳಿಲ್ಲದೆ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಬೇಡಿ: ವಿದೇಶಾಂಗ ಸಚಿವಾಲಯ

Date:

ನವದೆಹಲಿ, ಜೂ.28: ಪ್ರಯಾಣಕ್ಕೆ ಅಗತ್ಯವಿರುವ ಎಲ್ಲಾ ಪ್ರಯಾಣ ದಾಖಲೆಗಳನ್ನು ಪಡೆಯುವವರೆಗೆ ನಾಗರಿಕರು ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪ್ರಾರಂಭಿಸಬಾರದು ಎಂದು ವಿದೇಶಾಂಗ ಸಚಿವಾಲಯ ಸೂಚಿಸಿದೆ. ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಯಾತ್ರೆ ಕೈಗೊಳ್ಳುವಾಗ ನೇಪಾಳದಲ್ಲಿ ಸಿಲುಕಿರುವ ಭಾರತೀಯ ಯಾತ್ರಿಕರಿಂದ ಸಹಾಯಕ್ಕಾಗಿ ವಿನಂತಿಗಳನ್ನು ಸ್ವೀಕರಿಸಿದ ನಂತರ ಸಚಿವಾಲಯ ಈ ಸಲಹೆಯನ್ನು ನೀಡಿದೆ.

ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಕೆಲವು ಭಾರತೀಯ ನಾಗರಿಕರು ಚೀನಾಕ್ಕೆ ಪ್ರವೇಶಿಸಲು ಅಗತ್ಯವಿರುವ ಕಡ್ಡಾಯ ಪ್ರವೇಶ ಪರವಾನಿಗೆ ಮತ್ತು ವೀಸಾವನ್ನು ಪಡೆಯದೆ ನೇಪಾಳಕ್ಕೆ ಪ್ರಯಾಣಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪರಿಣಾಮವಾಗಿ, ಹಲವಾರು ಯಾತ್ರಿಕರು ಸಿಕ್ಕಿಹಾಕಿಕೊಂಡಿದ್ದಾರೆ ಮತ್ತು ಸಚಿವಾಲಯದಿಂದ ಸಹಾಯವನ್ನು ಕೋರಿದ್ದಾರೆ. ಯಾತ್ರಿಕರು ದೃಢೀಕೃತ ಪ್ರಯಾಣ ದಾಖಲೆಗಳಿಲ್ಲದೆ ಯಾತ್ರೆಯನ್ನು ಪ್ರಾರಂಭಿಸಬಾರದು ಎಂದು ಸಲಹೆ ನೀಡಿತು, ಯಾತ್ರೆ ಕೈಗೊಳ್ಳುವ ಮೊದಲು ತಮ್ಮ ಪ್ರವಾಸ ನಿರ್ವಾಹಕರು ಸರಿಯಾಗಿ ನೋಂದಾಯಿಸಲ್ಪಟ್ಟಿದ್ದಾರೆ ಮತ್ತು ಅಧಿಕೃತಗೊಳಿಸಲ್ಪಟ್ಟಿದ್ದಾರೆಯೇ ಎಂದು ಪರಿಶೀಲಿಸಲು ಸಚಿವಾಲಯವು ಯಾತ್ರಿಕರಿಗೆ ಕಿವಿಮಾತು ಹೇಳಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಕ್ಷಣ: ಕಾರ್ಗಿಲ್ ಯೋಧ ಅನಂತಪದ್ಮನಾಭ ನಾಯಕ್

ಶಿರ್ವ, ಜು.26: 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶದ ಪರವಾಗಿ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ: ಸಿದ್ದರಾಮಯ್ಯ

ಬೆಂಗಳೂರು, ಜು.26: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ....
error: Content is protected !!