ನವದೆಹಲಿ, ಜೂ.28: ಪ್ರಯಾಣಕ್ಕೆ ಅಗತ್ಯವಿರುವ ಎಲ್ಲಾ ಪ್ರಯಾಣ ದಾಖಲೆಗಳನ್ನು ಪಡೆಯುವವರೆಗೆ ನಾಗರಿಕರು ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪ್ರಾರಂಭಿಸಬಾರದು ಎಂದು ವಿದೇಶಾಂಗ ಸಚಿವಾಲಯ ಸೂಚಿಸಿದೆ. ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಯಾತ್ರೆ ಕೈಗೊಳ್ಳುವಾಗ ನೇಪಾಳದಲ್ಲಿ ಸಿಲುಕಿರುವ ಭಾರತೀಯ ಯಾತ್ರಿಕರಿಂದ ಸಹಾಯಕ್ಕಾಗಿ ವಿನಂತಿಗಳನ್ನು ಸ್ವೀಕರಿಸಿದ ನಂತರ ಸಚಿವಾಲಯ ಈ ಸಲಹೆಯನ್ನು ನೀಡಿದೆ.
ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಕೆಲವು ಭಾರತೀಯ ನಾಗರಿಕರು ಚೀನಾಕ್ಕೆ ಪ್ರವೇಶಿಸಲು ಅಗತ್ಯವಿರುವ ಕಡ್ಡಾಯ ಪ್ರವೇಶ ಪರವಾನಿಗೆ ಮತ್ತು ವೀಸಾವನ್ನು ಪಡೆಯದೆ ನೇಪಾಳಕ್ಕೆ ಪ್ರಯಾಣಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪರಿಣಾಮವಾಗಿ, ಹಲವಾರು ಯಾತ್ರಿಕರು ಸಿಕ್ಕಿಹಾಕಿಕೊಂಡಿದ್ದಾರೆ ಮತ್ತು ಸಚಿವಾಲಯದಿಂದ ಸಹಾಯವನ್ನು ಕೋರಿದ್ದಾರೆ. ಯಾತ್ರಿಕರು ದೃಢೀಕೃತ ಪ್ರಯಾಣ ದಾಖಲೆಗಳಿಲ್ಲದೆ ಯಾತ್ರೆಯನ್ನು ಪ್ರಾರಂಭಿಸಬಾರದು ಎಂದು ಸಲಹೆ ನೀಡಿತು, ಯಾತ್ರೆ ಕೈಗೊಳ್ಳುವ ಮೊದಲು ತಮ್ಮ ಪ್ರವಾಸ ನಿರ್ವಾಹಕರು ಸರಿಯಾಗಿ ನೋಂದಾಯಿಸಲ್ಪಟ್ಟಿದ್ದಾರೆ ಮತ್ತು ಅಧಿಕೃತಗೊಳಿಸಲ್ಪಟ್ಟಿದ್ದಾರೆಯೇ ಎಂದು ಪರಿಶೀಲಿಸಲು ಸಚಿವಾಲಯವು ಯಾತ್ರಿಕರಿಗೆ ಕಿವಿಮಾತು ಹೇಳಿದೆ.




By
ForthFocus™