Friday, July 24, 2026
Friday, July 24, 2026

ಶಾಂತಿನಿಕೇತನ ಯುವ ವೃಂದ: ಹಡಿಲು ಭೂಮಿಯಲ್ಲಿ ಸುಗ್ಗಿ ಕೃಷಿ

ಶಾಂತಿನಿಕೇತನ ಯುವ ವೃಂದ: ಹಡಿಲು ಭೂಮಿಯಲ್ಲಿ ಸುಗ್ಗಿ ಕೃಷಿ

Date:

ಹೆಬ್ರಿ: ಶೈಕ್ಷಣಿಕ ಸಾಮಾಜಿಕ ಆರ್ಥಿಕ ಹೀಗೆ ಎಲ್ಲಾ ರಂಗದಲ್ಲೂ ವಿಶೇಷವಾಗಿ ಗುರುತಿಸಿಕೊಂಡಿರುವ ಶಾಂತಿನಿಕೇತನ ಯುವ ವೃಂದ ಉಡುಪಿ ಪರ್ಯಾಯ ಅದಮಾರು ಮಠದ ಶ್ರೀ ಶ್ರೀ ಈಶಪ್ರೀಯ ತೀರ್ಥ ಶ್ರೀಪಾದರ ಸಲಹೆಯಂತೆ 2020 ರಿಂದಲೂ ಹಡಿಲು ಭೂಮಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ.

ಕುಚ್ಚೂರಿನ ಜಾರ್ಮಕ್ಕಿ ಸತೀಶ್ ಶೆಟ್ಟಿ ಅವರು ಉಚಿತವಾಗಿ ನೀಡಿದ ಸುಮಾರು 3 ಎಕ್ರೆ ಪ್ರದೇಶದಲ್ಲಿ ಶಾಂತಿನಿಕೇತನ ಸೌಹಾರ್ದ ಸಹಕಾರಿಯ ಆರ್ಥಿಕ ನೆರವಿನಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಕಳೆದ ಜುಲೈನಲ್ಲಿ ಖಾತೆ (ಮುಂಗಾರು ಬೆಳೆ) ಕೃಷಿ ಅತಿಯಾದ ಮಳೆಯ ಕಾರಣ ನಷ್ಟ ಅನುಭಸಿದರೂ ಛಲ ಬಿಡದ ಸಂಘದ ಸದಸ್ಯರು ಸುಗ್ಗಿ ಕೃಷಿಯಲ್ಲಿ ತೊಡಗಿದ್ದಾರೆ.

ಸಂಘದ ಹಡಿಲು ಭೂಮಿ ಕೃಷಿಯಲ್ಲಿ ಬೆಳೆದ ಭತ್ತದಲ್ಲಿ ತಮ್ಮದೇ ಬ್ರ್ಯಾಂಡ್ ನಲ್ಲಿ ಶಾಂತಿನಿಕೇತನ ಕಜೆ ಅಕ್ಕಿ ಹೊರತರಲಾಗಿತ್ತು.

ಸಂಘದ ಅಧ್ಯಕ್ಷರಾದ ರಾಜೇಶ್, ಸದಸ್ಯರಾದ ಜಯಕರ, ರವೀಶ್ ಶೆಟ್ಟಿ, ನರೇಂದ್ರ, ಪ್ರಸನ್ನ, ರಾಜೇಶ್ರೀ, ವಿನೋದಾ, ಚಂದ್ರಾವತಿ, ಕಲಾವತಿ, ಶಾರದಾ, ವನಜಾ, ಮೀನಾಕ್ಷಿ ಮತ್ತಿತರರು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತ್ರಿಶಾ ವಿದ್ಯಾ ಕಾಲೇಜು: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ

ಕಟಪಾಡಿ, ಜು.23: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಅಂಡ್...

ಶೈಕ್ಷಣಿಕ ಬದುಕಿನ ಅರ್ಥವನ್ನು ಅರಿತುಕೊಳ್ಳಿ: ವಿದ್ಯಾರ್ಥಿಗಳಿಗೆ ಡಾ. ಕೆ. ಉಮೇಶ್ ಶೆಟ್ಟಿ ಕರೆ

ಕುಂದಾಪುರ, ಜು.23: ವಿದ್ಯಾರ್ಥಿಗಳು ಪಠ್ಯಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಧನಾತ್ಮಕವಾಗಿ ಚಿಂತಿಸಿ,...

ಕಟ್ಟಡ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದ ಬಾಲ ಕಾರ್ಮಿಕನ ರಕ್ಷಣೆ

ಉಡುಪಿ, ಜು.23: ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರ್ ಗ್ರಾಮದಲ್ಲಿ ನಡೆಯುತ್ತಿರುವ ಕಟ್ಟಡ...
error: Content is protected !!