Monday, August 3, 2026
Monday, August 3, 2026

ಮೊಬೈಲ್ ಗೀಳಿನಿಂದ ಹೊರಬನ್ನಿ: ಸುಚಿತ್ ಕೋಟ್ಯಾನ್

ಮೊಬೈಲ್ ಗೀಳಿನಿಂದ ಹೊರಬನ್ನಿ: ಸುಚಿತ್ ಕೋಟ್ಯಾನ್

Date:

ಕಾರ್ಕಳ, ಆ.2: ಇಂದು ಜನರಲ್ಲಿ ಮೊಬೈಲ್ ವೀಕ್ಷಣೆಯ ಮಟ್ಟ ಹೆಚ್ಚಾಗಿ, ಅನಾರೋಗ್ಯಕರ ಮನಸ್ಥಿತಿ ಉಂಟಾಗಿದೆ. ಇದರಿಂದ ಹೊರಬರಲು ಹವ್ಯಾಸಗಳು, ವ್ಯಾಯಾಮ, ಸಂಘ ಜೀವನದ ಜೊತೆಗೆ ಸಕಾರಾತ್ಮಕ ಜೀವನ ಶೈಲಿ ನಮ್ಮಲ್ಲಿದ್ದರೆ ಆರೋಗ್ಯಕರ ಬದುಕು ಸಾಧ್ಯ ಎಂದು ಎಂ.ಜಿ.ಎಂ ಕಾಲೇಜಿನ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಸುಚಿತ್ ಕೋಟ್ಯಾನ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಆಯೋಜಿಸಿದ ‘ಡೂಮ್ ಸ್ಕ್ರೋಲಿಂಗ್ ಟು ಡೀಪ್ ಫೋಕಸ್’ ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.

ಉಪಪ್ರಾಂಶುಪಾಲರಾದ ಸಾಹಿತ್ಯ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸುಮಿತ್ರಾ, ಎನ್.ಸಿ.ಸಿ ಅಧಿಕಾರಿ ಲೆ. ಮಂಜುನಾಥ್ ಮುದೂರು, ಎನ್.ಎಸ್ ಎಸ್ ಉಪಸಂಯೋಜನಾಧಿಕಾರಿ ಪ್ರಸಾದ್ ಆಚಾರ್ಯ, ದೈ.ಶಿ.ನಿರ್ದೇಶಕಿ ಸೌಜನ್ಯ ಹೆಗ್ಡೆ ಹಾಗೂ ಎನ್ ಎಸ್.ಎಸ್ ನಾಯಕಿ ಅನ್ವಿತಾ ಶೆಟ್ಟಿ ಉಪಸ್ಥಿತರಿದ್ದರು. ಎನ್.ಎಸ್.ಎಸ್ ನಾಯಕ ಧನುಷ್ ಚೌಟ ಕಾರ್ಯಕ್ರಮ ನಿರೂಪಿಸಿ, ಶ್ರೀಕರ್ ಭಟ್ ಸ್ವಾಗತಿಸಿ, ಅಧ್ವೆತ್ ಸಾಲ್ಯಾನ್ ಅತಿಥಿಯನ್ನು ಪರಿಚಯಿಸಿ ಆಶ್ಲೇಷ್ ಪ್ರಭು ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಮನ್‌ವೆಲ್ತ್ ಕ್ರೀಡಾಕೂಟ ಸಂಪನ್ನ; ಪದಕ ಪಟ್ಟಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ

ಸ್ಪೋರ್ಟ್ಸ್ ಬುಲೆಟಿನ್, ಆ.2: 2026 ರ ಕಾಮನ್‌ವೆಲ್ತ್ ಕ್ರೀಡಾಕೂಟವು ಭಾನುವಾರ ಗ್ಲ್ಯಾಸ್ಗೋದ...

ಆರೂರು: ಸಿಸಿ ಕ್ಯಾಮೆರಾ ಮತ್ತು ನಿಯಂತ್ರಣ ಕೊಠಡಿ ಉದ್ಘಾಟನೆ

ಆರೂರು, ಆ.2: ಶ್ರೀ ವಿಷ್ಣುಮೂರ್ತಿ ಯುವಕ ಮಂಡಲ ಆರೂರು ನೇತೃತ್ವದಲ್ಲಿ, ಬ್ರಹ್ಮಾವರ...

ದೇಶಾದ್ಯಂತ 100 ವಾರಗಳ ಮಾದಕ ದ್ರವ್ಯ ವಿರೋಧಿ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ, ಆ.2: ಭಾರತವು ವಿಕಸಿತ ಭಾರತವಾಗುವತ್ತ ಸಾಗುತ್ತಿರುವಾಗ, ದೇಶದ ಯುವಕರು ದೈಹಿಕವಾಗಿ....

ತ್ರಿಶಾ ವಿದ್ಯಾ ಪಿಯು ಕಾಲೇಜು: ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ

ಕಟಪಾಡಿ, ಆ.2: ತ್ರಿಶಾ ವಿದ್ಯಾ ಪಿ. ಯು ಕಾಲೇಜಿನಲ್ಲಿ ಕೆ.ಸಿ.ಇ.ಟಿ, ನೀಟ್...
error: Content is protected !!