Home ಸುದ್ಧಿಗಳು ಪ್ರಾದೇಶಿಕ ಬಾರಕೂರು: ಚುನಾವಣಾ ಸಾಕ್ಷರತಾ ಜಾಗೃತಿ ಜಾಥ

ಬಾರಕೂರು: ಚುನಾವಣಾ ಸಾಕ್ಷರತಾ ಜಾಗೃತಿ ಜಾಥ

132
0

ಬಾರಕೂರು, ಏ.5: ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ ಘಟಕದ ವತಿಯಿಂದ ಚುನಾವಣಾ ಸಾಕ್ಷರತೆ ಕುರಿತು ಅರಿವು ಮೂಡಿಸುವ ಜಾಗೃತಿ ಜಾಥ ಶುಕ್ರವಾರ ನಡೆಯಿತು. ಎನ್.ಸಿ.ಸಿ. ಅಧಿಕಾರಿಗಳಾದ ಸುದಿನ ಟಿ.ಎ ಇವರು ಕೆಡೆಟ್ಸ್ ಗಳಿಗೆ ಮತದಾನದ ಕುರಿತಾದ ಪ್ರತಿಜ್ಞಾ ವಿಧಿಯನ್ನು ಬೋಧಿಸುವುದರೊಂದಿಗೆ ಜಾಥಾಕ್ಕೆ ಚಾಲನೆ ನೀಡಿದರು. ಕಾಲೇಜಿನಿಂದ ಹೊರಟು, ಬಾರ್ಕೂರು ರಥಬೀದಿ ಮಾರ್ಗವಾಗಿ ಸಾಗಿದ ಎನ್.ಸಿ.ಸಿ ಕೆಡೆಟ್ಸ್ ಗಳು ಭಿತ್ತಿಚಿತ್ರ ಪ್ರದರ್ಶನ ಮತ್ತು ಘೋಷಣೆಗಳ ಮೂಲಕ ಸಾರ್ವಜನಿಕರಲ್ಲಿ ಮತದಾನದ ಮಹತ್ವದ ಬಗೆಗೆ ಅರಿವು ಮೂಡಿಸಿದರು. ಕಾಲೇಜಿನ ಮತದಾನ ಸಾಕ್ಷರತಾ ಘಟಕದ ಸಂಚಾಲಕರಾದ ರಾಧಾಕೃಷ್ಣ ನಾಯಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.