Home ಸುದ್ಧಿಗಳು ಪ್ರಾದೇಶಿಕ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ನೇತೃತ್ವದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ

ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ನೇತೃತ್ವದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ

382
0

ಉಡುಪಿ: ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ನೇತೃತ್ವದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಇಂದು ಉಡುಪಿ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು. ಕರಾವಳಿ ಪೊಲೀಸ್ ಪಡೆಯ ಗಂಗೊಳ್ಳಿ ಠಾಣೆಯ ಶಾಂತಗೌಡ ದೋರನಹಳ್ಳಿ ಮಾತನಾಡಿ ಶುಭ ಹಾರೈಸಿದರು.

ವಾಲ್ಮೀಕಿ ಸಮಾಜದ ಹಿರಿಯರಾದ ಹನುಮಂತರಾಯ ದೊರೆ ಮಾತನಾಡಿ, ಯುವಕರಿಗೆ ಮಾದರಿಯಾದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದವರ ಕಾರ್ಯ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಪಿಡಬ್ಲ್ಯೂಡಿ ಇಂಜಿನಿಯರ್ ಸೋಮನಾಥ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಉಪಾಧ್ಯಕ್ಷ ಈರಪ್ಪ ಗೌಂಡಿ, ಪಂಪೇಶ್, ನಾಗರಾಜ್, ಸಿದ್ದಣ್ಣ ಪೂಜಾರಿ, ಸಂತೋಷ್ ದೊರೆ, ಶಿವರಾಜ್ ವಾಲಿಕಾರ್, ಗೋಪಾಲ್ ದೊರೆ ಅಮಲಿಹಾಳ, ದೇವರಾಜ್ ದೊರೆ, ಶಶಿಕುಮಾರ್ ಬಿರಾದರ್, ಗೋಪಾಲ್ ದೊರೆ ದೇವದುರ್ಗ, ನಾಗರಾಜ್ ದೊರೆ, ಮುತ್ತುರಾಜ್ ದೊರೆ, ದೇವೇಂದ್ರ ಸಾಹುಕಾರ, ಗಣೇಶ್ ಪಾತ್ರೋಟಿ ಮುಂತಾದವರು ಉಪಸ್ಥಿತರಿದ್ದರು.

ಪರಶು ಬಿ ದೊರೆ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಗನಗೌಡ ದೊರೆ ವಂದಿಸಿದರು. ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.