ನವದೆಹಲಿ, ಮೇ 8: ಆಪರೇಷನ್ ಸಿಂಧೂರ್ನಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಗುರುವಾರ ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಲು ಸರ್ವಪಕ್ಷ ಸಭೆಯಲ್ಲಿ ಅವರು ಮಾತನಾಡಿದರು. ಸಿಂಧೂರ್ ಕಾರ್ಯಾಚರಣೆ ಮುಗಿಯಲಿಲ್ಲ, ಇನ್ನೂ ಜಾರಿಯಲ್ಲಿದೆ ಎಂದು ರಕ್ಷಣಾ ಸಚಿವರು ತಿಳಿಸಿದರು. ಪಾಕಿಸ್ತಾನದ ಯಾವುದೇ ದಾಳಿಗೆ ಪ್ರತಿಕ್ರಿಯಿಸಲು ಭಾರತೀಯ ಮಿಲಿಟರಿ ಸಿದ್ಧವಾಗಿದೆ. ಶತ್ರು ಪಡೆಗಳು ದಾಳಿ ಮಾಡಿದರೆ ಪ್ರತಿದಾಳಿ ಮಾಡುತ್ತದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವರದಿಗಾರರ ಜತೆ ಮಾತನಾಡುತ್ತಾ, ಸಭೆಯಲ್ಲಿ ಕೆಲವು ಮಾಹಿತಿಯನ್ನು ಗೌಪ್ಯವಾಗಿಡಬೇಕು ಎಂದು ಕೇಂದ್ರ ಸಚಿವರು ಹೇಳಿದ್ದಾರು. ನಾವೆಲ್ಲರೂ ಸರ್ಕಾರದೊಂದಿಗಿದ್ದೇವೆ ಎಂದು ಹೇಳಿದರು.
ಆಪರೇಷನ್ ಸಿಂಧೂರ್: 100 ಭಯೋತ್ಪಾದಕರ ಹತ್ಯೆ
ಆಪರೇಷನ್ ಸಿಂಧೂರ್: 100 ಭಯೋತ್ಪಾದಕರ ಹತ್ಯೆ
Date:




By
ForthFocus™