ಶಿವಮೊಗ್ಗ, ಮೇ 8: ಶಿವಮೊಗ್ಗ ಜಿಲ್ಲೆಯ ಹೊಳಲೂರು ಏತನೀರಾವರಿ ಪುನಶ್ಚೇತನ ಕಾಮಗಾರಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಭೋಸರಾಜು ಅವರು ಅನುಮೋದನೆ ನೀಡಿದ್ದು, ರೂ.4.80 ಕೋಟಿ ವೆಚ್ಚದ ಕಾಮಗಾರಿಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತುಂಗಭದ್ರಾ ನದಿಯಿಂದ ನಾರಾಯಣ ಕೆರೆ, ಸೀಗೆಹಳ್ಳಿ, ಬೂದಿಗೆರೆ ಕೆರೆ, ಸುತ್ತುಕೋಟೆ ಕೆರೆಗಳಿಗೆ ಏತ ನೀರಾವರಿ ಯೋಜನೆಯಡಿ ನೀರೆತ್ತುವ ವ್ಯವಸ್ಥೆಯನ್ನು ದುರಸ್ತಿ, ನವೀಕರಣಗೊಳಿಸುವ, ಪಂಪ್ ಮೋಟಾರ್ಗಳ ರಿಪೇರಿ, ಹರಮಘಟ್ಟ ಕೆರೆ ಪಾತ್ರದ ಹೊಸ ಪ್ರದೇಶಗಳಿಗೆ ಮೋಟಾರು ಪರಿಕರಗಳನ್ನು ಸಾಗಿಸುವ, ಸೀಗೆ ಕೆರೆ ಬಳಿ ಹೊಸದಾಗಿ ಪೈಪ್ಲೈನ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡುವಂತೆಯೂ ಸೂಚಿಸಿದ್ದಾರೆ.




By
ForthFocus™