ಗಂಗೊಳ್ಳಿ, ಜು.23: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಲೇಖಕ ನರೇಂದ್ರ ಎಸ್ ಗಂಗೊಳ್ಳಿ ಅವರ ಏಳನೆಯ ಪುಸ್ತಕ ಮತ್ತು ಸಂಜೀವ ಪಾರ್ವತಿ ಪ್ರಕಾಶನದ ನಾಲ್ಕನೇ ಪ್ರಕಟಣೆ ರೂಮಿನೊಳಗಿಂದ ಕಥಾ ಸಂಕಲನದ ಬಿಡುಗಡೆ ಸಮಾರಂಭವು ದಿನಾಂಕ 24-07-2026 ರಂದು ಇಲ್ಲಿನ ಗುಜ್ಜಾಡಿ ಗೋಪಾಲ್ ನಾಯಕ್ ರೋಟರಿ ಸಭಾಂಗಣದಲ್ಲಿ ನಡೆಯಲಿದೆ. ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನ ಸಭಾ ಬಳಗದ ಅಧ್ಯಕ್ಷರಾದ ಗೋಪಾಲ ಪೂಜಾರಿ ಕೃತಿಯನ್ನು ಬಿಡುಗಡೆಗೊಳಿಸಲಿದ್ದು, ರಾಘವೇಂದ್ರ ಬಿಲ್ಲವ, ರಾಘವೇಂದ್ರ ದೇವಾಡಿಗ , ಪ್ರಾಂಶುಪಾಲರಾದ ಕವಿತಾ ಎಂ ಸಿ, ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
‘ರೂಮಿನೊಳಗಿಂದ’ ಕೃತಿ ಬಿಡುಗಡೆ
‘ರೂಮಿನೊಳಗಿಂದ’ ಕೃತಿ ಬಿಡುಗಡೆ
Date:




By
ForthFocus™