Monday, June 22, 2026
Monday, June 22, 2026

ಕೋಟ: ಎಐ ತರಬೇತಿ ಕಾರ್ಯಾಗಾರ

ಕೋಟ: ಎಐ ತರಬೇತಿ ಕಾರ್ಯಾಗಾರ

Date:

ಕೋಟ, ಜೂ.21: ಜ್ಞಾನಕ್ಕೆ ಕೊನೆಯೆಂಬುದಿಲ್ಲ ಶಿಕ್ಷಕರಾದವರು ಜ್ಞಾನದ ಹರವುಗಳನ್ನು ಸದಾ ವಿಸ್ತರಿಸಿಕೊಳ್ಳಬೇಕು. ಆ ದಿಸೆಯಲ್ಲಿ ನಾವೀನ್ಯ ರೂಪದ ಶಿಕ್ಷಣವನ್ನು ಪಡೆಯಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ. ಈ ದೃಷ್ಠಿಯಿಂದ ಎಐ ಇವತ್ತಿನ ಬಹು ಚರ್ಚೆಯ ವಿಷಯವಾಗಿದ್ದು ಆ ಕುರಿತು ನಾವು ಅದನ್ನು ಅರಿತುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಸಾಂಸ್ಕೃತಿಕ ಚಿಂತಕರಾದ ಇಬ್ರಾಹಿಂ ಸಾಹೇಬ್‌ ತಿಳಿಸಿದರು.

ಅವರು ಕಾರಂತ ಪ್ರತಿಷ್ಠಾನ ಕೋಟತಟ್ಟು ಗ್ರಾಮ ಪಂಚಾಯತ್‌, ನೆನಪು ಮೂವೀಸ್‌ ಮತ್ತು ಉಸಿರು ಕೋಟ ಆಶ್ರಯದಲ್ಲಿ ನಡೆದ ಎಐ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅಭ್ಯಾಗತರಾಗಿ ತರಬೇತುದಾರರಾದ ಮನೋಜ್‌ ಕಡಬ, ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕೆಂದು ನಲ್ನುಡಿಯ ಮಾತುಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿರುವ ವೀಣಾ ಸುರೇಶ್‌ ಎಐ ಕೃತಕ ಬುದ್ಧಿಮತ್ತೆಯ ಆಳ ಅಗತ್ಯತೆ ಅದನ್ನು ಅರಿಯುವ ವಿಚಾರ ಮತ್ತು ಅದರಲ್ಲಿರುವ ಹೊಸ ಸಾಧ್ಯತೆಗಳ ಬಗ್ಗೆ ಇಡೀ ದಿನ ತರಬೇತಿಯನ್ನು ನೀಡಿದರು. ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್‌ ಕೋಟರವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಶೈಲಜಾ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ತಡೆಯಲು ಪ್ರಾಥಮಿಕ ಶಾಲೆಗಳಲ್ಲಿ ಎಐ ಬಳಕೆ ನಿಷೇಧ

ಯು.ಬಿ.ಎನ್.ಡಿ., ಜೂ.21: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಉತ್ಪಾದಕ ಎಐ ಪರಿಕರಗಳನನ್ನು ಬಳಸದಂತೆ...

ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ- ಏಳು ಸಾವು

ಪೆರಿಯಪಾಳಯಂ, ಜೂಲ್.21: ತಮಿಳುನಾಡಿನ ಪೆರಿಯಪಾಳಯಂನಲ್ಲಿರುವ ಸಮುದ್ರಾಹಾರ ರಫ್ತು ಕಂಪನಿಯಲ್ಲಿ ಸಂಭವಿಸಿದ ಅಮೋನಿಯಾ...

ಬಾರಿಕೆರೆ: ಹಸಿರು ಹೆಜ್ಜೆ ಕಾರ್ಯಕ್ರಮ

ಕೋಟ, ಜೂ.21: ಪಂಚವರ್ಣ ಸಂಘಟನೆ ಆರಂಭದಲ್ಲಿ ಕೈಗೊಂಡ ಪರಿಸರದ ಕಾರ್ಯ ನಿತ್ಯ...

ಬಿಗಿ ಭದ್ರತೆಯ ನಡುವೆ ನಡೆದ NEET-UG 2026 ಮರುಪರೀಕ್ಷೆ; ಪರೀಕ್ಷೆ ಬರೆದ 20 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು

ನವದೆಹಲಿ, ಜೂ.21: ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆ...
error: Content is protected !!