ಉಡುಪಿ, ಜೂ 1: ಕಟಪಾಡಿಯ ಎಸ್ವಿಎಸ್ ಕನ್ನಡ ಮಾಧ್ಯಮ ಶಾಲೆಯ ಆಡಿಟೋರಿಯಂನಲ್ಲಿ ತ್ರಿಶಾ ಕ್ಲಾಸಸ್ ಸಿಎ ಫೌಂಡೇಶನ್ ಹಾಗೂ ಸಿಎಸ್ಇಇಟಿ ಮಾಹಿತಿ ಕಾರ್ಯಕ್ರಮ ನಡೆಯಿತು. ತ್ರಿಶಾ ಸಂಸ್ಥೆಯ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ಅವರು ಉದ್ಘಾಟಿಸಿ ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಅವಿರತವಾದ ಓದಿಗೆ ಖಂಡಿತವಾಗಿಯೂ ಫಲ ದೊರಕುತ್ತದೆ. ವಿದ್ಯಾರ್ಥಿಗಳು ಗುರಿಯನ್ನು ನಿರ್ಧರಿಸಿಕೊಂಡು ಅದರ ಕಡೆಗೆ ಮುನ್ನಡೆದಾಗ ಮಾತ್ರ ಗೆಲುವು ಸಾಧ್ಯವಾಗುತ್ತದೆ ಎಂದರು. ಸಿಎ ಫೌಂಡೇಶನ್ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿದರು. ಮಧ್ಯಾಹ್ನ ನಡೆದ ಸಿಎಸ್ಇಇಟಿ ಮಾಹಿತಿ ಕಾರ್ಯಾಗಾರವನ್ನು ಪ್ರೊ. ರಾಜ್ ಗಣೇಶ್ ಕಾಮತ್ ಅವರು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡುತ್ತಾ ಕನಸುಗಳಿಗೆ ಪರಿಧಿಗಳನ್ನ ಹಾಕಿಕೊಳ್ಳದೆ ಹೆಜ್ಜೆಗಳನ್ನು ಮುಂದಿಡಬೇಕು ದೃಢ ವಿಶ್ವಾಸ ಮತ್ತು ನಂಬಿಕೆಗಳು ಮಾತ್ರ ವಿದ್ಯಾರ್ಥಿಯನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ ಎಂದರು.
ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ವಿಘ್ನೇಶ್ ಶೆಣೈ, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುಲದೀಪ್ ಉಪಸ್ಥಿತರಿದ್ದರು. ಸಿ.ಎ ಸಿಎಸ್ ಇಇಟಿ ತರಗತಿ ಮತ್ತು ಪರೀಕ್ಷೆ ನಡೆಯುವ ವಿಧಾನ ವಿದ್ಯಾರ್ಥಿಗಳ ಅಭ್ಯಾಸ ಮಾರ್ಗದರ್ಶಿಕೆ ವೇಳಾಪಟ್ಟಿ ಅಣುಕು ಪರೀಕ್ಷೆ ಈ ಎಲ್ಲದರ ಕುರಿತು ಸಮಗ್ರ ಮಾಹಿತಿಯನ್ನು ನೀಡಲಾಯಿತು. 250ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಪ್ರಜ್ಞಾ ನಿರೂಪಿಸಿ, ಸ್ವಾಗತಿಸಿ,ವಂದಿಸಿದರು. ತ್ರಿಶಾ ಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




By
ForthFocus™