Wednesday, May 6, 2026
Wednesday, May 6, 2026

ಕೊರಂಗ್ರಪಾಡಿ ದೊಡ್ಡಮನೆ ಫ್ಯಾಮಿಲಿ ರಿಲಿಜಿಯಸ್ ಟ್ರಸ್ಟ್ ನ ಕುಟುಂಬದ 99 ಜನ ಸದಸ್ಯರಿಂದ ಕಾಪು ಅಮ್ಮನಲ್ಲಿ ಪ್ರಾರ್ಥನೆ

ಕೊರಂಗ್ರಪಾಡಿ ದೊಡ್ಡಮನೆ ಫ್ಯಾಮಿಲಿ ರಿಲಿಜಿಯಸ್ ಟ್ರಸ್ಟ್ ನ ಕುಟುಂಬದ 99 ಜನ ಸದಸ್ಯರಿಂದ ಕಾಪು ಅಮ್ಮನಲ್ಲಿ ಪ್ರಾರ್ಥನೆ

Date:

ಕಾಪು, ಏ.29: ಕೊರಂಗ್ರಪಾಡಿ ದೊಡ್ಡಮನೆ ಮನೆತನದಿಂದ 99 ಜನ ಸದಸ್ಯರು 99 ಚೆಂಡು ಮಲ್ಲಿಗೆ ಮತ್ತು 99 ಹೂವಿನ ಪೂಜೆ ಸಲ್ಲಿಸುವ ಮುಖೇನ ಕಾಪುವಿನ ಅಮ್ಮನ ಅಭಯ ವಾಕ್ಯವನ್ನು ಪಡೆದರು.

ಅಶ್ವತ ಸ್ವಯಂವರ ಸಹಿತಾದಿ ನಾಗದೇವರ ಪೂಜೆ ಮತ್ತು ದೈವದ ನೇಮೋತ್ಸವವು ನಿರ್ವಿಘ್ನವಾಗಿ ವಿಜೃಂಭಣೆಯಿಂದ ನೆರವೇರಿ ಕುಟುಂಬಕ್ಕೆ ಶ್ರೇಯಸ್ಸಾಗಲಿ ಎಂದು ಪ್ರಾರ್ಥಿಸಲಾಯಿತು.

ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ ಕುಮಾರಗುರು ತಂತ್ರಿ, ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ, ಕಾಪು ಕ್ಷೇತ್ರದ ಶಾಸಕ ಮತ್ತು ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕೊರಂಗ್ರಪಾಡಿ ದೊಡ್ಡಮನೆ ಫ್ಯಾಮಿಲಿ & ರಿಲಿಜಿಯಸ್ ಟ್ರಸ್ಟ್ ನ ಅಧ್ಯಕ್ಷ ಮತ್ತು ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ದೇವಳದ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಮಾಧವ ಆರ್. ಪಾಲನ್, ಶೇಖರ ಸಾಲ್ಯಾನ್, ರವೀಂದ್ರ ಮಲ್ಲಾರ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಸಾವಿತ್ರಿ ಗಣೇಶ್, ಪ್ರಚಾರ ಸಮಿತಿಯ ಜಯರಾಮ್ ಆಚಾರ್ಯ ಮತ್ತು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಸಾಯಿನಾಥ್ ಹೆಗ್ಡೆ, ಟ್ರಸ್ಟಿಗಳಾದ ಲತಾ ಸುಧೀರ್ ಶೆಟ್ಟಿ, ಉಷಾ ಮನೋಹರ್ ಶೆಟ್ಟಿ, ಅತುಲ್ ರಾಜ್ ಹೆಗ್ಡೆ, ಉಮನಾಥ್ ಶೆಟ್ಟಿ, ವಿಜಯ ಎಲ್. ಶೆಟ್ಟಿ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರವಾಸೋದ್ಯಮ ಸಚಿವರಿಗೆ ಸ್ವಾಗತ

ಮಂಗಳೂರು, ಮೇ 6: ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರಾದ...

ಕಾರಂತರ ಬದುಕಿನ ರೀತಿ ಹಿರಿಯ ನಾಗರಿಕರಿಗೆ ಮಾದರಿ: ನಿತ್ಯಾನಂದ ಪಡ್ರೆ

ಉಡುಪಿ, ಮೇ 5: ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಬೇಕು ಎಂಬ ಭಾವ...

ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಹಸ್ತಾಂತರ

ಕಾಪು, ಮೇ 5: ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಉಡುಪಿ...
error: Content is protected !!