ಗಂಗೊಳ್ಳಿ, ನ.2: ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ದೀಕ್ಷಿತ್ ಮೇಸ್ತ ಧ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಕನ್ನಡ ನಾಡು-ನುಡಿಯ ಬಗ್ಗೆ ಪ್ರೀತಿ ಮತ್ತು ಕಾಳಜಿ ಜಾಲತಾಣದ ಸ್ಟೇಟಸ್ಗಳಿಗೆ ಸೀಮಿತವಾಗಿರಬಾರದು, ನಿಜವಾದ ಅರ್ಥದಲ್ಲಿ ನಾವು ಅದನ್ನು ಪ್ರಕಟಪಡಿಸಬೇಕು ಎಂದು ಹೇಳಿದರು.
ಸಮಿತಿಯ ಜಿಲ್ಲಾಧ್ಯಕ್ಷರಾದ ಜಿ. ಕೆ.ವೆಂಕಟೇಶ್ ಕೊಡೇರಿ ಮನೆ, ಗಣೇಶ್ ಮಡಿವಾಳ, ನಿತ್ಯಾನಂದ ಗಾಣಿಗ, ನಾಗರಾಜ್ ಶೇರುಗಾರ್, ಗೋಪಾಲ, ಶಂಕರ ಪೂಜಾರಿ, ಗುರು ಪಟೇಲ್, ಲಕ್ಷ್ಮಣ ಬಿಲ್ಲವ, ಗಂಗಾಧರ ಪೈ,ಭಾಸ್ಕರ, ವಸಂತ ಸುವರ್ಣಅಶೋಕ್, ಎನ್ ಡಿ, ನಾಗರಾಜ ಖಾರ್ವಿ, ಭಾಸ್ಕರ ಗಂಗಾಧರ್ ಪೈ ಮೊದಲಾದವರು ಉಪಸ್ಥಿತರಿದ್ದರು. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು.




By
ForthFocus™