ಉಡುಪಿ, ಏ.26: ಸುಮಾರು ಒಂದು ಸಾವಿರ ವರ್ಷಗಳ ಹಳೆಯ ಶ್ರೀ ನಾಗಬ್ರಹ್ಮಸ್ಥಾನ ಮೂಡುಸಗ್ರಿಯಲ್ಲಿ ಸುಮಾರು 51 ಜಾತಿಯ ವಿವಿಧ ಗಿಡಗಳನ್ನು ಜೀರ್ಣೋದ್ಧಾರಗೊಳ್ಳುತ್ತಿರುವ ನಾಗಬನದಲ್ಲಿ ನಾಗಬ್ರಹ್ಮ ಅಭಿವೃದ್ಧಿ ಸಮಿತಿ ವತಿಯಿಂದ ನಮ್ಮ ಮನೆ ನಮ್ಮ ಮರ ತಂಡದ ಸಹಕಾರದೊಂದಿಗೆ ನೆಡಲಾಯಿತು.
ಇತ್ತೀಚಿಗಿನ ದಿನಗಳಲ್ಲಿ ಕಾಂಕ್ರೀಟೀಕರಣಗೊಳ್ಳುತ್ತಿರುವ ನಾಗಬನಗಳ ಮಧ್ಯೆ ಈ ವಿಶೇಷ ನಾಗಬನ ಎಲ್ಲರಿಗೂ ಮಾದರಿಯಾಗಿದೆ. ಈ ರೀತಿಯ ವಿನೂತನ ಮಾದರಿ ಕಾರ್ಯಕ್ರಮ ಸಂಯೋಜಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಖ್ಯಾತ ಉರಗತಜ್ಞ ಗುರುರಾಜ್ ಸನಿಲ್ ಹೇಳಿದರು.
ಸಮಿತಿಯ ಅಧ್ಯಕ್ಷ ವಿಷ್ಣುಪ್ರಸಾದ್ ತೆಂಕಿಲ್ಲಾಯ, ಶ್ರೀನಿವಾಸ, ಸಮಿತಿಯ ಪದಾಧಿಕಾರಿಗಳು, ವಿಜಯ್ ಕೊಡವೂರು, ಕಸಾಪ ಉಡುಪಿ ತಾಲೂಕು ರವಿರಾಜ್ ಹೆಚ್.ಪಿ., ಜನಾರ್ದನ್ ಕೊಡವೂರು, ಮಂಜುಳಾ ಪ್ರಸಾದ್, ಸಂದೀಪ್ ಮಂಜ, ಕಾವ್ಯವಾಣಿ ಕೊಡಗು, ಉದಯ ನಾಯ್ಕ್, ರಾಘವೇಂದ್ರ ಕರ್ವಾಲು ಮುಂತಾದವರು ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ನಿರೂಪಿಸಿದರು.




By
ForthFocus™