ಹಿರಿಯಡಕ, ಅ.28: ಮಾರಕ ಕಾಯಿಲೆಗಳ ತಡೆಗಟ್ಟುವಿಕೆಗೆ ರೋಗದ ಪ್ರಸರಣ ಮತ್ತು ನಿಯಂತ್ರಣದ ಕುರಿತಾದ ಸಮುದಾಯಿಕ ಎಚ್ಚರವೇ ಪರಿಣಾಮಕಾರಿ ಅತ್ಯುಪಯುಕ್ತ ಔಷಧದಂತೆ ಕೆಲಸ ಮಾಡುತ್ತದೆ ಎಂದು ಐ.ಆರ್.ಸಿ.ಟಿ.ಸಿ. ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿಯ ಆಪ್ತ ಸಮಾಲೋಚಕಿ ಸರಸ್ವತಿಯವರು ಅಭಿಪ್ರಾಯಪಟ್ಟರು. ಹಿರಿಯಡಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾ.ಸೇ.ಯೋ. ಮತ್ತು ಯೂತ್ ರೆಡ್ಕ್ರಾಸ್ ಘಟಕಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಆಯೋಜಿಸಿದ ಹೆಚ್.ಐ.ವಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರಭಾರ ಪ್ರಾಂಶುಪಾಲ ಡಾ. ಲಿತಿನ್ ಬಿ ಎಂ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಸೌಮ್ಯಲತಾ ಪಿ., ರಾ.ಸೇ.ಯೋ. ಮತ್ತು ಯೂತ್ ರೆಡ್ಕ್ರಾಸ್ ಕಾರ್ಯಕ್ರಮಾಧಿಕಾರಿ ನಂದೀಶ್ ಕುಮಾರ್ ಕೆ. ಸಿ. ಉಪಸ್ಥಿತರಿದ್ದರು. ನಂದೀಶ್ ಕುಮಾರ್ ಕೆ.ಸಿ. ಸ್ವಾಗತಿಸಿ, ನಿರೂಪಿಸಿದರು.




By
ForthFocus™