ಉಡುಪಿ, ಜೂ.23: ಶ್ರೀ ಕೃಷ್ಣ ಬಾಲನಿಕೇತನದಲ್ಲಿ ರೋಟರಾಕ್ಟ್ ಕ್ಲಬ್ ಉಡುಪಿ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಮಾಹೆ ಯೋಗ ವಿಭಾಗದ ಸಹ ಪ್ರಾಧ್ಯಪಕಿ ಡಾ. ಲಾವ್ಯ ಶೆಟ್ಟಿ ಯೋಗದ ಮಹತ್ವ ದ ಬಗ್ಗೆ ವಿವರಿಸಿ ಮಕ್ಕಳಿಂದ ಯೋಗ ಪ್ರಾತ್ಯಕ್ಷಿಕೆಯನ್ನು ಮಾಡಿಸಿದರು. ರೋಟರಿ ಉಡುಪಿ ಅಧ್ಯಕ್ಷ ಗುರುರಾಜ್ ಭಟ್, ರೋಟರಾಕ್ಟ್ ಸಭಾಪತಿ ಬಿ ಕೆ ನಾರಾಯಣ, ಬಾಲನಿಕೇತನ ದ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ಮಾತಾಜಿ ಉಪಸ್ಥಿತರಿದ್ದರು. ರೋ. ಅಪೂರ್ವ ಬಿ ಕೆ ಕಾರ್ಯಕ್ರಮ ಸಂಯೋಜಿಸಿದ್ದರು. ಬಾಲನಿಕೇತನದ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ರೋಟರಾಕ್ಟ್ ಅಧ್ಯಕ್ಷ ಅಂಶ್ ಕೋಟ್ಯಾನ್ ಸ್ವಾಗತಿಸಿದರು.
ರೋಟರಾಕ್ಟ್ ಕ್ಲಬ್ ಉಡುಪಿ: ಯೋಗ ದಿನಾಚರಣೆ
ರೋಟರಾಕ್ಟ್ ಕ್ಲಬ್ ಉಡುಪಿ: ಯೋಗ ದಿನಾಚರಣೆ
Date:




By
ForthFocus™