Home ಸುದ್ಧಿಗಳು ಪ್ರಾದೇಶಿಕ ಕನಕದಾಸರ ಜೀವನ ಸಂದೇಶ ಸರ್ವರಿಗೂ ಆದರ್ಶ: ಯಶ್ಪಾಲ್ ಸುವರ್ಣ

ಕನಕದಾಸರ ಜೀವನ ಸಂದೇಶ ಸರ್ವರಿಗೂ ಆದರ್ಶ: ಯಶ್ಪಾಲ್ ಸುವರ್ಣ

671
0

ಉಡುಪಿ: ಲೋಕ ಕಂಡ ಶ್ರೇಷ್ಠ ಸಂತ ಕವಿ ದಾಸವರೇಣ್ಯ ಕನಕದಾಸರ ಜಯಂತಿಯನ್ನು ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆ ವತಿಯಿಂದ ಯಶ್ಪಾಲ್ ಸುವರ್ಣರವರ ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಮಾತನಾಡಿ, ಕೀರ್ತನೆಗಳ ಮೂಲಕ ಸಮಾಜ ಪರಿವರ್ತನೆ ಮಾಡಿದ ಕನಕದಾಸರ ಜೀವನ ಸರ್ವರಿಗೂ ಆದರ್ಶ ಎಂದರು.

ರಾಜ್ಯ ಮೋರ್ಚಾದ ಉಪಾಧ್ಯಕ್ಷರಾದ ಅಶೋಕಮೂರ್ತಿ, ರಾಜ್ಯ ಕಾರ್ಯದರ್ಶಿ ವಿಠ್ಠಲ ಪೂಜಾರಿ ಹಾಗೂ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಉಡುಪಿ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲಾಧ್ಯಕ್ಷರುಗಳಾದ ಸುರೇಂದ್ರ ಪಣಿಯೂರು, ನಾರಾಯಣ. ಸಿ. ರೇಂಜ, ರವಿ ನಾಯ್ಕ್, ಕುಂದಾಪುರ ಮಂಡಲ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ, ಉಡುಪಿ ಜಿಲ್ಲಾ ಪ್ರಭಾರಿಯವರಾದ ರೇಷ್ಮಾ ಉದಯ ಶೆಟ್ಟಿ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ ಬಾಣ, ಸತೀಶ್ ಕುಲಾಲ್, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ಹಾಗೂ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಾ ಮಂಡಲಗಳ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.