Home ಸುದ್ಧಿಗಳು ಪ್ರಾದೇಶಿಕ ಯುವಕ ಮಂಡಲ ಸಾಣೂರು: ಯೋಗ ದಿನಾಚರಣೆ

ಯುವಕ ಮಂಡಲ ಸಾಣೂರು: ಯೋಗ ದಿನಾಚರಣೆ

1089
0

ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಯುವಕ ಮಂಡಲ (ರಿ.) ಸಾಣೂರು ಇದರ ಆಶ್ರಯದಲ್ಲಿ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮಂಡಲದ ಸಭಾಂಗಣದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಮಂಡಲದ ಅಧ್ಯಕ್ಷರೂ ಆಗಿರುವ ಪ್ರಸಾದ್ ಪೂಜಾರಿ, ದೈನಂದಿನ ಜೀವನದಲ್ಲಿ ವ್ಯಾಯಾಮ ಅತಿ ಅಗತ್ಯ. ಯೋಗ ಮಾಡುವುದರಿಂದ ಸರ್ವರೀತಿಯ ವ್ಯಾಯಾಮ ದೇಹಕ್ಕೆ ದೊರಕಿದಂತಾಗುತ್ತದೆ. ಇದರಿಂದ ಅರೋಗ್ಯವಾಗಿರಲು ಸಾಧ್ಯ ಎಂದರು.

ಮಂಡಲದ ಮಾಜಿ ಅಧ್ಯಕ್ಷರಾದ ಜಗದೀಶ್ ಕುಮಾರ್, ಶಂಕರ್ ಶೆಟ್ಟಿ, ಪ್ರಕಾಶ್ ಮಡಿವಾಳ, ಕೋಶಾಧಿಕಾರಿ ರಾಜೇಶ್, ಸಮಿತಿ ಸದಸ್ಯರಾದ ಪ್ರಮಿತ್, ಸುಮಂತ್, ಮನೀಶ್, ಹರೀಶ್, ಸತೀಶ್ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು. ಮಂಡಲದ ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಪ್ರಕಾಶ್ ರಾವ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮೋಹನ್ ಶೆಟ್ಟಿ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.