ಎಲ್ಲೂರು, ಏ.25: ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಗೋಶಾಲೆಯಲ್ಲಿ ಮೇವಿನ ದಾಸ್ತಾನು ಕೊಠಡಿ ನಿರ್ಮಾಣ ಕಾಮಗಾರಿಗೆ 17 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿದರು.
ಎಲ್ಲೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಉಷಾ, ಮಾಜಿ ಸದಸ್ಯರುಗಳಾದ ವಸಂತಿ ಮಧ್ವರಾಜ್, ದಯಾನಂದ ಶೆಟ್ಟಿಗಾರ್, ಶೋಭಾ ಶೆಟ್ಟಿ, ಎಲ್ಲೂರು ಬಿಜೆಪಿ ಶಕ್ತಿ ಕೇಂದ್ರ ಸಂಚಾಲಕ ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಪ್ರಮುಖರಾದ ಗಣೇಶ್ ಬೆಳ್ಳಿಬೆಟ್ಟು, ಸುಕೇಶ್ ಶೆಟ್ಟಿ, ಸಂದೇಶ್ ಶೆಟ್ಟಿ, ಪಶು ವೈದ್ಯಾಧಿಕಾರಿ ವೆಂಕಟಗಿರಿ, ಡಾ .ವಸಂತ್, ನಿರ್ಮಿತಿ ಕೇಂದ್ರದ ಮುಕೇಶ್ ಗುತ್ತಿಗೆದಾರ ಮನೋಜ್ ಉಪಸ್ಥಿತರಿದ್ದರು.




By
ForthFocus™