ಕೋಟ, ಮೇ 9: ತನ್ನ ವಿಶಿಷ್ಠವಾದ ಕಾರ್ಯದ ಮೂಲಕ ಮನೆ ಮಾತಾಗಿದ್ದ ಮತ್ತು ಸಾಮಾಜಿಕ ಸೇವೆಗಳಿಗೆ ತನ್ನನ್ನು ತಾನು ಅರ್ಪಿಸಿಕೊಂಡ, ಜೊತೆಗೆ ವ್ಯವಹಾರಗಳಲ್ಲಿ ತನ್ನದೇ ವಿಶಿಷ್ಠ ಛಾಪನ್ನು ಮೂಡಿಸಿದ ಗಿಳಿಯಾರು ಗಾಡಿ ಕೂಸ ಪೂಜಾರಿ ಅವರಿಗೆ ಬೇಸಿಗೆ ಶಿಬಿರ ವಿಕಸನದಲ್ಲಿ ನುಡಿನಮನ ಸಲ್ಲಿಸಲಾಯಿತು. ಗಾಡಿ ಕೂಸ ಪೂಜಾರಿಯವರ ಪುತ್ರರಾಗಿರುವ ಬೋಜ ಪೂಜಾರಿಯವರು ತನ್ನ ತಂದೆಯ ಕಾರ್ಯಗಳನ್ನು ಅವರು ನೀಡಿದ ಸಂದೇಶಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು.
ಶಿಬಿರದ ನಿರ್ದೇಶಕ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ ವಂದಿಸಿದರು. ವಿದ್ಯಾರ್ಥಿನಿಯರಾದ ಸೃಷ್ಠಿ ಮಾನ್ವಿ ಸಮೀಕ್ಷಾ ಮೊದಲಾದವರು ನುಡಿನಮನ ಸಲ್ಲಿಸಿದರು.




By
ForthFocus™