Sunday, May 31, 2026
Sunday, May 31, 2026

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು

Date:

ಚೆನ್ನೈ, ಫೆ.26: ಇಲ್ಲಿಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ನ ಸೂಪರ್ 8 ಪಂದ್ಯದಲ್ಲಿ ಭಾರತ ಜಿಂಬಾಬ್ವೆ ವಿರುದ್ಧ 72 ರನ್ ಗಳಿಂದ ಗೆಲುವನ್ನು ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಆಟವನ್ನಾಡುತ್ತಾ ಭದ್ರ ಬುನಾದಿ ಒದಗಿಸಿದರು. ಕಳೆದ ಎಲ್ಲಾ ಪಂದ್ಯಗಳಲ್ಲಿಯೂ ಫಾರ್ಮ್ ಕಂಡುಕೊಳ್ಳಲು ಎಡವಿದ ಅಭಿಷೇಕ್ ಇಂದಿನ ಪಂದ್ಯದಲ್ಲಿ ತನ್ನ ಎಂದಿನ ಶೈಲಿಯ ಸ್ಪೋಟಕ ಆಟ ಪ್ರದರ್ಶಿಸಿದರು. ತಲಾ 4 ಸಿಕ್ಸ್ ಮತ್ತು ಬೌಂಡರಿ ಒಳಗೊಂಡ 55 ರನ್ ಬಾರಿಸಿದರು. ಹಾರ್ದಿಕ್ ಪಾಂಡ್ಯ ಅಜೇಯ 50 ರನ್ ಬಾರಿಸಿದರು. ತಿಲಕ್ ವರ್ಮಾ ಅಜೇಯ 44 ರನ್ ಗಳಿಸಿ ತಂಡ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಸಹಕರಿಸಿದರು. 20 ಓವರ್ ಗಳಲ್ಲಿ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು.

ಬೃಹತ್ ಮೊತ್ತ ಚೇಸ್ ಮಾಡಲು ಗುರಿ ಇಟ್ಟ ಜಿಂಬಾಬ್ವೆ ತಂಡಕ್ಕೆ ಆರಂಭಿಕ ಆಟಗಾರ ಬ್ರಾನ್ ಬೆನೆಟ್ ಉತ್ತಮ ಆಟ ಪ್ರದರ್ಶಿಸಿದರು. 44 ರನ್ ಆಗುವಷ್ಟರಲ್ಲಿ ಮೊದಲ ವಿಕೆಟ್ ಪತನವಾಯಿತು. ಎರಡನೆಯ ವಿಕೆಟ್ 72 ಗೆ ಪತನವಾದರೂ ಮೂರನೇ ವಿಕೆಟ್ ಪತನವಾಗಿದ್ದು 144 ರನ್ ಗೆ.

ನಾಯಕ ಸಿಕಂದರ್ ರಾಜಾ ಉತ್ತಮ ಆಟ ಪ್ರದರ್ಶಿಸಿ 31 ರನ್ ಗೆ ಅರ್ಷದೀಪ್ ಸಿಂಗ್ ಎಸೆತದಲ್ಲಿ ಅಭಿಷೇಕ್ ಶರ್ಮಾಗೆ ಕ್ಯಾಚ್ ಒಪ್ಪಿಸಿದರು. ಅರ್ಷದೀಪ್ ಸಿಂಗ್ ಒಂದೇ ಓವರ್ ನಲ್ಲಿ ಎರಡು ಪ್ರಮುಖ ವಿಕೆಟ್ ಪಡೆದು ಜಿಂಬಾಬ್ವೆಗೆ ಗೆಲುವು ಮತ್ತಷ್ಟು ಕಠಿಣವಾಗಿಸಿದರು. ಅರ್ಷದೀಪ್ 3 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು. ಜಿಂಬಾಬ್ವೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್ ಕಲೆ ಹಾಕಿತು. ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಜೇಂದ್ರ ಪೂಜಾರಿ ಅವರಿಗೆ ಡಾ. ಆರ್.ಎಂ ಹಡಪದ್ ರಾಷ್ಟ್ರೀಯ ಪ್ರಶಸ್ತಿ

ಉಡುಪಿ, ಮೇ 31: ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ರಿ...

ಉನ್ನತ ಮಟ್ಟದ ಬಾಂಬ್ ಪರೀಕ್ಷೆ ನಡೆಸಿದ ಡಿ.ಆರ್.ಡಿ.ಓ

ಪಂಚಕುಲ, ಮೇ 31: ಹರಿಯಾಣದ ಪಂಚಕುಲ ಜಿಲ್ಲೆಯ ರಾಮಗಢದಲ್ಲಿರುವ ರಕ್ಷಣಾ ಸಂಶೋಧನೆ...

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ಮಾಳ-ತನಿಕೋಡು ಗೇಟ್ ರಸ್ತೆ ಪರಿಶೀಲನೆ

ಕಾರ್ಕಳ, ಮೇ 31: ಕಾರ್ಕಳ ತಾಲೂಕಿನ, ಮಾಳ ಗೇಟಿನಿಂದ ಎಸ್.ಕೆ ಬಾರ್ಡರ್...

ರಚನಾತ್ಮಕ ಪತ್ರಿಕೋದ್ಯಮವು ಯುವಕರಲ್ಲಿ ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ: ಉಪರಾಷ್ಟ್ರಪತಿ ರಾಧಾಕೃಷ್ಣನ್

ಕೊಟ್ಟಾಯಂ, ಮೇ 31: ರಾಜಕೀಯ ನಾಯಕತ್ವವು ಸಾರ್ವಜನಿಕ ಜೀವನದ ಅತ್ಯಂತ ಬೇಡಿಕೆಯ...
error: Content is protected !!