ಉಡುಪಿ, ಸೆ.17: ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ಇಲ್ಲಿನ ಎನ್ ಎಸ್ ಎಸ್ ಘಟಕ ಮತ್ತು ಯುವಸ್ಪಂದನ ಉಡುಪಿ ಇವರ ಸಹಯೋಗದಲ್ಲಿ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ ನಡೆಯಿತು. ಮುಖ್ಯ ತರಬೇತುದಾರರಾಗಿ ನಿಮ್ಹಾನ್ಸ್. ಬೆಂಗಳೂರು ಇಲ್ಲಿನ ತರಬೇತುದಾರರಾದ ಅನು ಶೇಣ್ವಿ ಆಗಮಿಸಿದ್ದರು. ಅವರೊಂದಿಗೆ ಶ್ಯಾಮಲಾ. ಯುವಸ್ಪಂದನ ಉಡುಪಿ, ಗಿರಿಜಾ ಹೆಗಡೆ, ಉಪನ್ಯಾಸಕರು ತರಬೇತುದಾರರಾಗಿ ಸುಮಾರು 300 ಕ್ಕೂ ಹೆಚ್ಚು ವಿಧ್ಯಾರ್ಥಿನಿಯರಿಗೆ ಜೀವನ ಕೌಶಲ್ಯ ಕುರಿತ ಒಂದು ದಿನದ ತರಬೇತಿಯು ಚಟುವಟಿಕೆಗಳ ಮೂಲಕ ನಡೆಸಲಾಯಿತು.
ಪ್ರಾಂಶುಪಾಲರಾದ ಜಗದೀಶ್ ಕುಮಾರ್ ಗಿಡಗಳಿಗೆ ನೀರು ಸಿಂಚನ ಮಾಡುವುದರ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪ್ರಿಯಾಂಕಾ ಮತ್ತು ಬಳಗ ಪ್ರಾರ್ಥನೆ ಮಾಡಿದರು. ಇತಿಹಾಸ ಉಪನ್ಯಾಸಕರಾದ ಪ್ರಕಾಶ್ ಶೆಟ್ಟಿ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಗಿರಿಜಾ ಹೆಗಡೆ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸುಝೈಫಾ ವಂದಿಸಿದರು. ಯುವಸ್ಪಂದನದ ಪಾರ್ಥಸಾರಥಿ, ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶುಭಗೀತಾ, ಎನ್ ಎಸ್ ಎಸ್ ಘಟಕದ ವಿಧ್ಯಾರ್ಥಿ ನಾಯಕಿ ಮೇಘಾ ಉಪಸ್ಥಿತರಿದ್ದರು.




By
ForthFocus™