ಬೆಂಗಳೂರು, ಜು.1: ತಿರುಪತಿಯ ತಿರುಮಲದಲ್ಲಿರುವ ಕರ್ನಾಟಕ ಛತ್ರದಲ್ಲಿ ‘ಕೃಷ್ಣ ರಾಜೇಂದ್ರ ಕಲ್ಯಾಣ ಮಂಟಪ’ವನ್ನು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಉದ್ಘಾಟಿಸಿದ್ದಾರೆ. ನೂತನವಾಗಿ ನಿರ್ಮಾಣಗೊಂಡಿರುವ ಮೈಸೂರು ಕಾಂಪ್ಲೆಕ್ಸ್ನ (ಹೊಸ ಕರ್ನಾಟಕ ಛತ್ರ) ಒಂದು ಬ್ಲಾಕ್ನಲ್ಲಿ ನಿರ್ಮಿಸಲಾಗಿರುವ ಕೃಷ್ಣರಾಜೇಂದ್ರ ಒಡೆಯರ್ ಕಲ್ಯಾಣ ಮಂಟಪದಲ್ಲಿ 13 ಕೊಠಡಿಗಳು ಮತ್ತು 500 ಆಸನಗಳಿವೆ. ಕರ್ನಾಟಕದಿಂದ ಬಂದು ತಿರುಮಲದಲ್ಲಿ ಮದುವೆ, ನಾಮಕರಣ ಮೊದಲಾದ ಸಮಾರಂಭಗಳನ್ನು ಆಯೋಜನೆ ಮಾಡುವ ಭಕ್ತರಿಗೆ ಇದು ಲಭ್ಯವಿರಲಿದೆ. ಆನ್ಲೈನ್ ಮೂಲಕ ಕಾಯ್ದಿರಿಸಲು ಅವಕಾಶ ನೀಡಲಾಗಿದೆ.
ತಿರುಪತಿಯಲ್ಲಿ ಕೃಷ್ಣರಾಜೇಂದ್ರ ಕಲ್ಯಾಣ ಮಂಟಪ ನಿರ್ಮಾಣ
ತಿರುಪತಿಯಲ್ಲಿ ಕೃಷ್ಣರಾಜೇಂದ್ರ ಕಲ್ಯಾಣ ಮಂಟಪ ನಿರ್ಮಾಣ
Date:




By
ForthFocus™