ರೋಟರಿ ಉಡುಪಿ ಮತ್ತು ಇಂದಿರಾ ಶಿವರಾವ್ ಪೋಲಿಟೆಕ್ನಿಕ್ – ಮೂಡುಪೆರಂಪಳ್ಳಿ, ಉಡುಪಿ ಇವರ ಜಂಟಿ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಉಡುಪಿ ಕೃಷ್ಣಾಪುರ ಮಠಾಧೀಶ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಸಂಸ್ಥೆಯ ಆವರಣದಲ್ಲಿ ಗೇರು ಸಸಿಯನ್ನು ನೆಡುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಸಂಸ್ಥೆಯ ಸಂಚಾಲಕರಾದ ಯು.ಕೆ. ರಾಘವೇಂದ್ರರಾಯರು, ಪ್ರಾಂಶುಪಾಲೆ ಪವಿತ್ರ ಡಿ, ರೋಟರಿ ಉಡುಪಿಯ ಅಧ್ಯಕ್ಷ ರೊ. ಹೇಮಂತ್ ಯು. ಕಾಂತ್, ಬಿ.ವಿ. ಲಕ್ಷ್ಮೀ ನಾರಾಯಣ, ಕಾರ್ಯದರ್ಶಿ ಜೆ. ಜಿ. ಪ್ರಭು, ಪರಿಸರ ಯೋಜನೆ ಸಂಯೋಜಕ ರಂಜಿತಾ ಶೇಟ್ ಮುಂತಾದವರು ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಸೇರಿ ಒಟ್ಟು 60 ಸಸಿಗಳನ್ನು ನೆಟ್ಟರು.




By
ForthFocus™