Thursday, August 13, 2026
Thursday, August 13, 2026

ಇಎಸ್ಐ ರೋಗಿಗಳಿಗೆ ತೊಂದರೆ ಮಾಡದೆ ಚಿಕಿತ್ಸೆ ನೀಡಲು ಆದೇಶ; ಹರ್ಷ ವ್ಯಕ್ತಪಡಿಸಿದ ಸಂಸದ ಕೋಟ

ಇಎಸ್ಐ ರೋಗಿಗಳಿಗೆ ತೊಂದರೆ ಮಾಡದೆ ಚಿಕಿತ್ಸೆ ನೀಡಲು ಆದೇಶ; ಹರ್ಷ ವ್ಯಕ್ತಪಡಿಸಿದ ಸಂಸದ ಕೋಟ

Date:

ಉಡುಪಿ, ಆ.12: ಇಎಸ್ಐ ರೋಗಿಗಳಿಗೆ ತೊಂದರೆ ಮಾಡದೆ ಚಿಕಿತ್ಸೆ ನೀಡಲು ಆದೇಶಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರವರಿಗೆ ಧನ್ಯವಾದಗಳು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನೊಂದಾಯಿತ ಖಾಸಗಿ ಆಸ್ಪತ್ರೆಗಳ ಮೂಲಕ ವ್ಯವಸ್ಥಿತವಾಗಿ ನಡೆಯುತ್ತಿದ್ದ ಇಎಸ್ಐ ಚಿಕಿತ್ಸೆ ಇಲಾಖಾಧಿಕಾರಿಗಳ ಗೊಂದಲದ ನಿಲುವಿನಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಗಂಭೀರ ಸ್ಥಿತಿಯಲ್ಲಿ ಬಂದ ರೋಗಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಯಬೇಕೆಂಬ ಅಧಿಕಾರಿಗಳ ಸೂಚನೆಯಿಂದ ಹೃದಯಾಘಾತ, ಮೆದುಳು ಶಸ್ತ್ರ ಚಿಕಿತ್ಸೆ ಇನ್ನಿತರ ಗಂಭೀರ ಮತ್ತು ತುರ್ತು ಚಿಕಿತ್ಸೆ ನೀಡಲು ಸಾಧ್ಯವಾಗದ ಘಟನೆ ನಿರ್ಮಾಣವಾಗಿ ಚಿಕಿತ್ಸೆ ನಿರತ ವೈದ್ಯಾಧಿಕಾರಿಗಳು ಆತಂಕ ಸ್ಥಿತಿಯಲ್ಲಿದ್ದರೆ ಮಾರಣಾಂತಿಕ ತುರ್ತು ಪರಿಸ್ಥಿತಿಯಲ್ಲಿ ವಿಡಿಯೋ ಕರೆಗೆ ಪ್ರತಿಕ್ರಿಯೆ ನೀಡಲಾಗದ ರೋಗಿಗಳಿಗೆ ಚಿಕಿತ್ಸೆ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ವಿಷಯದಲ್ಲಿ ಕೇಂದ್ರ ಕಾರ್ಮಿಕ ಇಲಾಖೆ ಮಧ್ಯಪ್ರವೇಶಿಸಿ ಗೊಂದಲ ಪರಿಹರಿಸಿ ಇಎಸ್ಐ ಫಲಾನುಭವಿಗಳ ನೆರವಿಗೆ ಬರಬೇಕೆಂದು ಕಾರ್ಮಿಕ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸಂಸದ ಕೋಟ ಮನವಿ ಮಾಡಿದ್ದರು.

ವಾರಾಂತ್ಯದಲ್ಲಿ ಬರುವ ರಜಾ ದಿನಗಳು, ತುರ್ತು ರಾತ್ರಿ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಇಎಸ್ಐ ಅಧಿಕಾರಿಗಳು ಸಂಪರ್ಕಕ್ಕೆ ಲಭ್ಯವಿಲ್ಲದ ಕಾರಣ ರೋಗಿಗಳು ಪರದಾಡುವಂತಾಗಿದೆ. ಐಸಿಯು ನಲ್ಲಿ ದಾಖಲಾದ ಮತ್ತು ಆಪರೇಷನ್ ಥಿಯೇಟರ್ ನಲ್ಲಿ ಇರುವ ಗಂಭೀರ ರೋಗಿಗಳು ವಿಸಿಯಲ್ಲಿ ಭಾಗವಹಿಸಲಾಗುತ್ತಿಲ್ಲ. ಕೆಲವು ಆಸ್ಪತ್ರೆಗಳಲ್ಲಿ ನೆಟ್ವರ್ಕ್ ಸಮಸ್ಯೆಗಳಿಂದ ವಿಡಿಯೋ ಕರೆ ಸಿಗುತ್ತಿಲ್ಲ. ಉಡುಪಿ ಜಿಲ್ಲೆಯ ಆಸ್ಪತ್ರೆಗಳು ಸಹ ರೋಗಿಗಳಿಗೆ ಚಿಕಿತ್ಸೆ ನೀಡಲು ಕಷ್ಟಪಡುತ್ತಿವೆ. ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸಿ ಸಂಸದ, ಶಾಸಕರು ಮಾತನಾಡಿದರೂ ಇಲಾಖೆ ಸರಿಯಾಗಿ ಸ್ಪಂದಿಸದೆ ಸಮಸ್ಯೆ ಉಂಟಾಗಿದೆಯೆಂದು ಸಚಿವರ ಗಮನಕ್ಕೆ ತಂದಿದ್ದೆ ಎಂದು ಸಂಸದ ಕೋಟ ಹೇಳಿದರು.

ತಕ್ಷಣ ಪ್ರತಿಕ್ರಿಸಿದ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ಸರ್ಕಾರದ ಇಎಸ್ಐ ಡೈರೆಕ್ಟರ್ ಜನರಲ್ ಅಶೋಕ್ ಕುಮಾರ್ ಸಿಂಗ್ ರವರಿಗೆ ನಿರ್ದೇಶನ ನೀಡಿ ಇಎಸ್ಐ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಯಾವುದೇ ತೊಂದರೆ ಮಾಡದೆ ಇಎಸ್ಐ ಅನುಷ್ಠಾನ ಮಾಡಲು ಆದೇಶಿಸಿದರು.
ಯಾವುದೇ ಅಧಿಕಾರಿ ಕಾರಣವಿಲ್ಲದೆ ಗೊಂದಲ ಮಾಡಿದರೆ ಸೂಕ್ತ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದ್ದಾರೆ.

ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸಚಿವೆ ಶೋಭಾ ಕರಂದ್ಲಾಜೆಗೆ ಕ್ಷೇತ್ರದ ಜನತೆಯ ಪರವಾಗಿ ಕೃತಜ್ಞತೆ ತಿಳಿಸುತ್ತೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮುಂಬೈ: ಘಾಟ್ಕೋಪರ್ ಚಾಲ್‌ನಲ್ಲಿ ಭೂಕುಸಿತ; ಏಳು ಸಾವು; ಹಲವರಿಗೆ ಗಾಯ

ಮುಂಬಯಿ, ಆ.12: ಮುಂಬೈನ ಘಾಟ್ಕೋಪರ್ ಚಿರಾಗ್ ನಗರದಲ್ಲಿ ಬುಧವಾರ ಮುಂಜಾನೆ ಭೂಕುಸಿತ...

ಸಿಂಕ್‌ಫೀಲ್ಡ್ ಕಪ್‌: ಜಾವೋಖಿರ್ ಸಿಂದಾರೋವ್ ವಿರುದ್ಧ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದಗೆ ಗೆಲುವು

ಸ್ಪೋರ್ಟ್ಸ್ ಬುಲೆಟಿನ್, ಆ.12: ಯುನೈಟೆಡ್ ಸ್ಟೇಟ್ಸ್‌ನ ಸೇಂಟ್ ಲೂಯಿಸ್‌ನಲ್ಲಿ ನಡೆದ ಸಿಂಕ್‌ಫೀಲ್ಡ್...

ಪುಸ್ತಕಗಳನ್ನು ಓದಿ ಜ್ಞಾನ ಸಂಪಾದನೆ ಹೆಚ್ಚಿಸಿ: ಡಾ. ಎಲ್ಲಮ್ಮ

ಉಡುಪಿ, ಆ.12: ಜ್ಞಾನ ಎಂಬುದು ಒಂದು ಶಕ್ತಿ, ಪುಸ್ತಕಗಳನ್ನು ಓದುವುದರಿಂದ ನಾವು...

ಬೈಂದೂರು: ನುಗ್ಗಿಬೆಟ್ಟಿನಲ್ಲಿ ವಿಜಯನಗರ ಅರಸ ಇಮ್ಮಡಿ‌‌ ಹರಿಹರನ ಶಾಸನ ಅಧ್ಯಯನ

​ಉಡುಪಿ, ಆ.12: ಬೈಂದೂರು ತಾಲೂಕಿನ ಬಿಜೂರು ಗ್ರಾಮದ ನುಗ್ಗಿಬೆಟ್ಟಿನ ಕಲ್ಸಂಕದ ಲಕ್ಷ್ಮೀ...
error: Content is protected !!