ಉಡುಪಿ, ಜೂ.16: ತಿರುವನಂತಪುರಂ ರಾಜ ಮನೆತನದ ರಾಣಿ ಪದ್ಮನಾಭಾಸೇವಿನಿ ಅಶ್ವತಿ ತಿರುನಾಳ್ ಗೌರಿ ಲೆಕ್ಷ್ಮಿ ಬಾಯಿ ಅವರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಪಡೆದುಕೊಂಡರು. ಹಾಗೂ ಕೃಷ್ಣ ಮಂತ್ರ ಲೇಖನ ಯಜ್ಞದ ಅಂಗವಾಗಿ ಪುಸ್ತಕವನ್ನು ಪಡೆದುಕೊಂಡು. ಸರ್ವಜ್ಞ ಪೀಠದಲ್ಲಿ ಕೃಷ್ಣ ಮಂತ್ರ ಲೇಖನವನ್ನು ಪ್ರಾರಂಭಿಸಿದರು. ಶೀರೂರು ಮಠದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯ ಹಾಗೂ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೆಕಾರು ಉಪಸ್ಥಿತರಿದ್ದರು.
ಶ್ರೀ ಕೃಷ್ಣ ಮಠಕ್ಕೆ ತಿರುವನಂತಪುರಂ ರಾಜಮನೆತನದ ರಾಣಿ ಭೇಟಿ
ಶ್ರೀ ಕೃಷ್ಣ ಮಠಕ್ಕೆ ತಿರುವನಂತಪುರಂ ರಾಜಮನೆತನದ ರಾಣಿ ಭೇಟಿ
Date:




By
ForthFocus™