ಉಡುಪಿ, ಜೂ.16: ಉಡುಪಿ ಅರ್ಥ್ ಮೂವರ್ಸ್ ಅಸೋಸಿಯೇಷನ್ ಇದರ ಸಮಾಲೋಚನ ಸಭೆ ಜೂನ್ 16 ರಂದು ಉಡುಪಿ ಸಂತೆಕಟ್ಟೆಯ ಮಧುವನ ಹೋಟೆಲಿನ ಸಭಾಂಗಣದಲ್ಲಿ ನಡೆಯಿತು. ಗಿರೀಶ್ ಪ್ರಸ್ತಾವಿಕವಾಗಿ ಮಾತನಾಡಿ ಸಂಘದ ಅವಶ್ಯಕತೆ ಹಾಗೂ ಪದಾಧಿಕಾರಿಗಳ ಆಯ್ಕೆಯ ವಿಚಾರವಾಗಿ ಮಾತನಾಡಿದರು. ಸಭೆಯಲ್ಲಿ ಗೌರವಾಧ್ಯಕ್ಷರು, ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಗೌರವ ಸಲಹೆಗಾರರ ಆಯ್ಕೆ ಅವಿರೋಧವಾಗಿ ನಡೆಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀನಿವಾಸ ಉಪಾಧ್ಯಾಯ ಕೊಡವೂರು, ನೂತನ ಸಂಘದ ಬದ್ಧತೆಯ ಕುರಿತಾಗಿ ಮಾತನಾಡಿ ನೂತನ ದರ ಪಟ್ಟಿಯನ್ನು ಘೋಷಿಸಿದರು. ನೂತನ ದರ ಪಟ್ಟಿ ಜುಲೈ ಒಂದರಿಂದ ಕಡ್ಡಾಯವಾಗಿ ಅನ್ವಯವಾಗುತ್ತದೆ ಎಂದು ನಿರ್ಧರಿಸಲಾಯಿತು. ನೂತನ ಕಾರ್ಯದರ್ಶಿ ಉಮೇಶ್ ಶೆಟ್ಟಿ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರ ಪಟ್ಟಿಯನ್ನು ಘೋಷಿಸಿದರು. ಸುಮಾರು 72 ಮಂದಿ ಸದಸ್ಯರು ಸಮಾಲೋಚನೆ ಸಭೆಯಲ್ಲಿ ಉಪಸ್ಥಿತರಿದ್ದರು. ಗೌರವಾಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಬ್ರಹ್ಮಾವರ ಆಯ್ಕೆಯಾದರು.

ವೇದಿಕೆಯಲ್ಲಿ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ, ಉಪಾಧ್ಯಕ್ಷರಾದ ಗಿರೀಶ್ ಉದ್ಯಾವರ, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಕೃಷ್ಣ ಅಂಬಲಪಾಡಿ, ಕಿರಣ್ ಕೋಟ್ಯಾನ್ ನಿಟ್ಟೂರು, ಕೋಶಾಧಿಕಾರಿ ಮೈಕಲ್ ಮಸ್ಕರೇನಸ್, ಸಂಘಟನಾ ಕಾರ್ಯದರ್ಶಿ ಸತೀಶ್ ಮಠದಬೆಟ್ಟು, ನಾಗರಾಜ್ ಹೆಗ್ಡೆ, ಸತೀಶ್ ಮೂಡುಬೆಟ್ಟು, ರಾಘು ಶೆಟ್ಟಿ ಕಟಪಾಡಿ, ನಝೀರ್ ಸಾಹೇಬ್ ನೇಜಾರು ಉಪಸ್ಥಿತರಿದ್ದರು.




By
ForthFocus™