Sunday, May 31, 2026
Sunday, May 31, 2026

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ಮಾಳ-ತನಿಕೋಡು ಗೇಟ್ ರಸ್ತೆ ಪರಿಶೀಲನೆ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ಮಾಳ-ತನಿಕೋಡು ಗೇಟ್ ರಸ್ತೆ ಪರಿಶೀಲನೆ

Date:

ಕಾರ್ಕಳ, ಮೇ 31: ಕಾರ್ಕಳ ತಾಲೂಕಿನ, ಮಾಳ ಗೇಟಿನಿಂದ ಎಸ್.ಕೆ ಬಾರ್ಡರ್ ಮೂಲಕ ಶೃಂಗೇರಿಯ ತನಿಕೋಡು ಗೇಟ್ ವರೆಗಿನ 29 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಬಗ್ಗೆ ಅಧಿಕಾರಿಗಳೊಂದಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಚರ್ಚಿಸಿದರು. ಬಳಿಕ ಮಾತನಾಡಿದ ಅವರು, ಹೆದ್ದಾರಿ ಅಭಿವೃದ್ಧಿಗೆ 550 ಕೋಟಿ ರೂಪಾಯಿ ಪ್ರಸ್ತಾಪನೆ ಕೇಂದ್ರ ಸರ್ಕಾರದ ಮುಂದಿದೆ. ಮಾಳ ಗೇಟ್ ಆರಂಭದಿಂದ ಇಕ್ಕೆಲಗಳಲ್ಲಿ ಬರುವ ಅರಣ್ಯ ತೆರವುಗೊಳಿಸಲು ಕಂದಾಯ ಇಲಾಖೆ ಮೂಲಕ ಅರಣ್ಯ ಇಲಾಖೆಗೆ 50 ಎಕರೆ ಭೂಮಿಯನ್ನು ವರ್ಗಾಯಿಸಬೇಕಾಗಿದ್ದು ಕಡತ ವಿಲೇವಾರಿಗಾಗಿ ಶಿವಮೊಗ್ಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ಸಮಯ ನಿಗಧಿಕರಿಸಲಾಗಿದೆ.

ಇಲಾಖೆಯ ಮಾಹಿತಿಯ ಪ್ರಕಾರ ಹಿಂದೆ ಗುಲಗುಂಜಿ ಮನೆ, ಕೊರ್ಕನಹಳ್ಳಿ ಸಹಿತ ಮೂರು ಸೇತುವೆಗಳು ಮಂಜೂರಾಗಿದ್ದರೂ ಅರಣ್ಯ ಇಲಾಖೆಯ ಅನುಮತಿ ಸಿಗದೇ ರದ್ದಾಗಿದ್ದವು. ಅನುಮತಿ ನಿರೀಕ್ಷಿಸಿ ರಸ್ತೆಯ ಇಕ್ಕೆಲಗಳಲ್ಲಿ ಗಡಿ ಗುರುತು ಮಾಡಲು ಸೂಚನೆ ನೀಡಿದ್ದೆ. ಪ್ರಯತ್ನ ಸಫಲವಾಗಿ ಕಂದಾಯ ಇಲಾಖೆ ಪ್ರಸ್ತಾಪಿತ ಭೂಮಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೆ 1999 ರಿಂದ ಅಂದರೆ ಸುಮಾರು 25 ವರ್ಷದಿಂದ ನೆನೆಗುದಿಗೆ ಬಿದ್ದ ಮಾಳ-ತನಿಕೋಡು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ಚಾಲನೆ ಸಿಗಲಿದೆ.
ರಾ.ಹೆ. ಇಲಾಖೆಯ ನವೀನ್ ರಾಜ್, ಅರಣ್ಯ ಇಲಾಖೆ ಅರುಣ್, ಸತೀಶ್ ನಾಯಕ್, ಸುಬ್ರಹ್ಮಣ್ಯ ಮುಂತಾದವರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಜೇಂದ್ರ ಪೂಜಾರಿ ಅವರಿಗೆ ಡಾ. ಆರ್.ಎಂ ಹಡಪದ್ ರಾಷ್ಟ್ರೀಯ ಪ್ರಶಸ್ತಿ

ಉಡುಪಿ, ಮೇ 31: ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ರಿ...

ಉನ್ನತ ಮಟ್ಟದ ಬಾಂಬ್ ಪರೀಕ್ಷೆ ನಡೆಸಿದ ಡಿ.ಆರ್.ಡಿ.ಓ

ಪಂಚಕುಲ, ಮೇ 31: ಹರಿಯಾಣದ ಪಂಚಕುಲ ಜಿಲ್ಲೆಯ ರಾಮಗಢದಲ್ಲಿರುವ ರಕ್ಷಣಾ ಸಂಶೋಧನೆ...

ರಚನಾತ್ಮಕ ಪತ್ರಿಕೋದ್ಯಮವು ಯುವಕರಲ್ಲಿ ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ: ಉಪರಾಷ್ಟ್ರಪತಿ ರಾಧಾಕೃಷ್ಣನ್

ಕೊಟ್ಟಾಯಂ, ಮೇ 31: ರಾಜಕೀಯ ನಾಯಕತ್ವವು ಸಾರ್ವಜನಿಕ ಜೀವನದ ಅತ್ಯಂತ ಬೇಡಿಕೆಯ...

ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಜೀವನ ಮೌಲ್ಯ ಉಪನ್ಯಾಸ ಮಾಲಿಕೆ

ಕುಂದಾಪುರ, ಮೇ 31: ವಿದ್ಯಾರ್ಥಿಗಳು ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಆಮುಖೇನ...
error: Content is protected !!