ಬ್ರಹ್ಮಾವರ, ಮೇ 11: ಜಯಂಟ್ಸ್ ಗ್ರೂಪ್ ಬ್ರಹ್ಮಾವರ ವತಿಯಿಂದ ಮಾತೃ ದಿನಾಚರಣೆ ಪ್ರಯುಕ್ತ
ಬ್ರಹ್ಮಾವರದ ಅಪ್ಪ-ಅಮ್ಮ ಆಶ್ರಮದಲ್ಲಿ ವಿಶೇಷ ಸೇವಾ ಕಾರ್ಯಕ್ರಮ ನಡೆಯಿತು.
ಆಶ್ರಮಕ್ಕೆ ಅಗತ್ಯವಿರುವ ಆಹಾರ ಧಾನ್ಯಗಳು ಹಾಗೂ ದಿನನಿತ್ಯ ಬಳಕೆಯ ಸಾಮಗ್ರಿಗಳನ್ನು ವಿತರಿಸಲಾಯಿತು. ಅದೇ ರೀತಿ ಕೇಕ್ ಕಟ್ ಮಾಡುವ ಮೂಲಕ ಹಿರಿಯ ನಾಗರಿಕರೊಂದಿಗೆ ಮಾತುಕತೆ ನಡೆಸಲಾಯಿತು. ಸಕ್ರಿಯ ಸದಸ್ಯ ಪ್ರದೀಪ್ ಶೆಟ್ಟಿ ತಾಯಿಯ ನೆನಪಿನಲ್ಲಿ ಆಶ್ರಮದ ನಿವಾಸಿಗಳಿಗೆ ಮಧ್ಯಾಹ್ನದ ಊಟ ನೀಡಿ, ಆಶ್ರಮಕ್ಕೆ ಧನ ಸಹಾಯ ಮಾಡಲಾಯಿತು.
ಅಧ್ಯಕ್ಷ ಅಣ್ಣಯ್ಯ ದಾಸ್, ಯುನಿಟ್ ಡೈರೆಕ್ಟರ್ ಸುಂದರ ಪೂಜಾರಿ, ಕಾರ್ಯದರ್ಶಿ ಮಿಲ್ಟನ್ ಒಲಿವರ್, ಪ್ರತಿಭಾ, ಡೊರಿಸ್, ರೊನಾಲ್ಡ್ ಡಯಾಸ್, ವಿವೇಕಾನಂದ ಕಾಮತ್, ಜನಾದ೯ನ್ ನಾಯಕ್, ಶ್ರೀನಾಥ ಕೋಟ, ರಾಘವೇಂದ್ರ ಕರ್ವಾಲು ಮುಂತಾದರು ಉಪಸ್ಥಿತರಿದ್ದರು.




By
ForthFocus™