Monday, May 4, 2026
Monday, May 4, 2026

ವಿದ್ಯಾರ್ಥಿಗಳೇ ನಿಮ್ಮ ಕನಸು ದೊಡ್ಡದಾಗಿರಲಿ: ಸಟ್ವಾಡಿ ವಿಜಯ ಶೆಟ್ಟಿ

ವಿದ್ಯಾರ್ಥಿಗಳೇ ನಿಮ್ಮ ಕನಸು ದೊಡ್ಡದಾಗಿರಲಿ: ಸಟ್ವಾಡಿ ವಿಜಯ ಶೆಟ್ಟಿ

Date:

ಕುಂದಾಪುರ, ಮೇ 4: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಆಹ್ವಾನಿತ ಅಂತರ್ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಅದ್ದೂರಿಯಾಗಿ ಕಾಲೇಜಿನ ದಿ. ಅಪ್ಪಣ್ಣ ಹೆಗ್ಡೆ ವೇದಿಕೆಯಲ್ಲಿ ಜರುಗಿತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಾಕ್ತನ ವಿದ್ಯಾರ್ಥಿಯಾದ ಸಟ್ವಾಡಿ ವಿಜಯ ಶೆಟ್ಟಿ ಮಾತನಾಡಿ ಕಾಲೇಜು ಜೀವನವೂ ನನ್ನ ಜೀವನದ ಮುಖ್ಯ ಹಂತವಾಗಿದ್ದು, ನನ್ನ ವ್ಯಕ್ತಿತ್ವವನ್ನು ರೂಪಿಸಿದ ಈ ಕಾಲೇಜು ಶಿಸ್ತು, ಮೌಲ್ಯ ಪರಿಶ್ರಮ ಮತ್ತು ಕನಸು ಸಾಧಿಸಲು ಬೇಕಾಗಿರುವ ಧೈರ್ಯವನ್ನು ಕಲಿಸಿದೆ. ಆದ್ದರಿಂದ ವಿದ್ಯಾರ್ಥಿಗಳೇ ನಿಮ್ಮ ಕನಸು ದೊಡ್ಡದಾಗಿರಲಿ, ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ ನಿಮ್ಮ ಶಿಕ್ಷಕರನ್ನು ತಂದೆ ತಾಯಿಯವರನ್ನು ಗೌರವಿಸಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಟ್ರಸ್ಟಿ ಸದಸ್ಯರಾದ ಸುಭಾಶ್ಚಂದ್ರ ಶೆಟ್ಟಿ ಕೆ ಸ್ಪರ್ಧೆಯಲ್ಲಿ ಜಯಗಳಿಸಿದ ತಂಡಗಳಿಗೆ ಶುಭ ಹಾರೈಸಿದರು. ಚಿತ್ತಾರ 2026 ರ ಆಹ್ವಾನಿತ ಅಂತರ್ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೋಟ ಪಡುಕೆರೆ, ದ್ವಿತೀಯ ಸ್ಥಾನವನ್ನು ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ, ತೃತೀಯ ಸ್ಥಾನವನ್ನು ವಿದ್ಯಾಲಕ್ಷ್ಮೀ ಗ್ರೂಪ್ ಆಫ್ ಇನ್ಸ್ಸಿಟ್ಯೂಷನ್ ತಮ್ಮದಾಗಿಸಿಕೊಂಡರು.

ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ ಮತ್ತು ಆಡಳಿತಾಧಿಕಾರಿ ಮೋಹನ ಕೆ.ಎನ್ ಹಾಗೂ ಚಿತ್ತಾರ- 2026 ರ ಸಂಯೋಜಕರಾದ ಡಾ. ವಿಶ್ವನಾಥ ಆಚಾರ್ಯ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ದಯಾನಂದ ಎನ್ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ರವಿಚಂದ್ರ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಟಪಾಡಿ: ನೂತನವಾಗಿ ಆರಂಭಗೊಂಡ ಸಾರಿಗೆ ಬಸ್ಸಿಗೆ ಸಂಭ್ರಮದ ಸ್ವಾಗತ

ಬ್ರಹ್ಮಾವರ, ಮೇ 4: ಬ್ರಹ್ಮವಾರ ಮಟಪಾಡಿ ನೀಲಾವರ ಮಾರ್ಗವಾಗಿ ತೆರಳುವ ಉಡುಪಿ...
error: Content is protected !!