Wednesday, April 15, 2026
Wednesday, April 15, 2026

ದಮನಿತರ ಪಾಲಿನ ಬಿಡುಗಡೆಯ ಬೆಳಕು ಅಂಬೇಡ್ಕರ್‌

ದಮನಿತರ ಪಾಲಿನ ಬಿಡುಗಡೆಯ ಬೆಳಕು ಅಂಬೇಡ್ಕರ್‌

Date:

ಹಿರಿಯಡಕ, ಏ.15: ಈ ನೆಲದ ತಳ ಸಮುದಾಯಗಳ ಪರವಾದ ಎಲ್ಲ ಜೀವಪರ ದನಿಗಳನ್ನು ಕೂಡಿಕೊಂಡು ತನ್ನ ಓದು, ವಿವೇಕ, ಕರುಣೆಯ ಜೀವದ್ರವವನ್ನು ಬಳಸಿ ಈ ನೆಲದ ಸಾಮಾನ್ಯರ ಬದುಕಿನ ಕತ್ತಲೆಗೆ ಬೆಳಕಾಗುವ ಅಪೂರ್ವ ಸಂವಿಧಾನವನ್ನು ಕೊಟ್ಟ ಮಹಾಮಾನವತಾವಾದಿ ಭೀಮರಾವ್‌ ಅಂಬೇಡ್ಕರ್‌ ಅವರ ಜನ್ಮದಿನ ದಮನಿತರ ಪಾಲಿನ ಬಿಡುಗಡೆಯ ದಿನವೂ ಹೌದು ಎಂದು ಪ್ರಾಂಶುಪಾಲ ಡಾ. ಜಯಪ್ರಕಾಶ್‌ ಶೆಟ್ಟಿ ಹೆಚ್‌ ಹೇಳಿದರು. ಇವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 135ನೇ ಜನ್ಮದಿನದ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ಸೊರಬ ಸರ್ಕಾರಿ ಪದವಿಪೂರ್ವ ಕಾಲೇಜಿನ ಗಿರಿಜಮ್ಮ, ಹೊನ್ನಾಳಿ ವಿಜಯ ಪದವಿಪೂರ್ವ ಕಾಲೇಜಿನ ವಸಂತ್‌, ಅರುಣ್‌ ಹಾಗೂ ಇತರರ ಜೊತೆ ಕಾಲೇಜಿನ ಬೋಧಕ ಮತ್ತು ಬೋಧಕೇತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಈರಬಸು ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಸಿತೀಕ್ಷಾ ವಂದಿಸಿದರು. ಆಂಗ್ಲ ವಿಭಾಗದ ಮುಖ್ಯಸ್ಥೆ ನಿಶ್ಚಿತ ಎಸ್‌ ಹೋಬಳಿದಾರ್‌ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಯ್ಪುರ: ಉಷ್ಣ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ

ರಾಯ್ಪುರ, ಏ.15: ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ವೇದಾಂತ ಲಿಮಿಟೆಡ್ ಉಷ್ಣ ವಿದ್ಯುತ್...

ಕೋಟ ಗ್ರಾಮ ಪಂಚಾಯತ್: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 135 ನೇ ಜಯಂತಿ ಆಚರಣೆ

ಕೋಟ, ಏ.15: ಕೋಟ ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್...

ಮುದ್ದಣ್ಣನಗರ: ಸ್ವಚ್ಛತಾ ಅಭಿಯಾನ

ಕಾರ್ಕಳ, ಏ.14: ಶ್ರೀ ಧರ್ಮರಸು ಕೊಡಮನಣಿತ್ತಾಯಿ ಕುಕ್ಕಿನಂತಾಯ ದೈವಸ್ಥಾನ ಬ್ರಹ್ಮ ಬೈದರ್ಕಳ...
error: Content is protected !!