ಕಾರ್ಕಳ, ಏ.14: ಶ್ರೀ ಧರ್ಮರಸು ಕೊಡಮನಣಿತ್ತಾಯಿ ಕುಕ್ಕಿನಂತಾಯ ದೈವಸ್ಥಾನ ಬ್ರಹ್ಮ ಬೈದರ್ಕಳ ಗರಡಿ ಸಾಣೂರು ಇದರ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಗರಡಿಗೆ ಸಂಪರ್ಕಿಸುವ ಪದ್ಮನಾಭನಗರ ಮುದ್ದಣ್ಣನಗರ ರಸ್ತೆಯನ್ನು ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇದರ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛತೆ ಮಾಡಿದರು.
ಪದ್ಮನಾಭನಗರ ಮುದ್ದಣ್ಣ ನಗರ ಸಂಪರ್ಕ ರಸ್ತೆಯ ಈ ಶ್ರಮದಾನ ಸ್ವಚ್ಛತೆಯಲ್ಲಿ ಮಂಡಲದ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ರಾಘು ಪೂಜಾರಿ, ಕಾರ್ಯದರ್ಶಿ ರಾಜೇಶ್, ಸಾಂಸ್ಕೃತಿಕ ಕಾರ್ಯದರ್ಶಿ ಮುರಳಿ ಸುವರ್ಣ, ಜೊತೆ ಕಾರ್ಯದರ್ಶಿ ಪ್ರಶಾಂತ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ವಿದ್ಯಾನಂದ, ಸಾಮಾಜಿಕ ಜಾಲತಾಣದ ಸುದರ್ಶನ್ ನಾಯ್ಕ್, ಸದಸ್ಯರಾದ ಜಯನ್ ಶೆಟ್ಟಿ, ಪ್ರಕಾಶ್ ರಾವ್, ದಿನೇಶ್ ಮಡಿವಾಳ ಭಾಗವಹಿಸಿದ್ದರು.




By
ForthFocus™