Sunday, July 26, 2026
Sunday, July 26, 2026

ಇಂದ್ರಾಳಿ: 27 ಪ್ರಬೇಧಗಳ 185 ಹಕ್ಕಿಗಳ ವೀಕ್ಷಣೆ

ಇಂದ್ರಾಳಿ: 27 ಪ್ರಬೇಧಗಳ 185 ಹಕ್ಕಿಗಳ ವೀಕ್ಷಣೆ

Date:

ಉಡುಪಿ, ನ.23: ಉಡುಪಿಗೆ ಬನ್ನಿ ತಂಡದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಇಂದ್ರಾಳಿಯಲ್ಲಿ ನ.22 ಶನಿವಾರ ಸಂಜೆ ಹಕ್ಕಿ ವೀಕ್ಷಣೆ ಕಾರ್ಯಕ್ರಮ ನಡೆಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಪರಿಸರಾಸಕ್ತರು ಕಾಲ್ನಡಿಗೆಯ ಮೂಲಕ ಸುತ್ತಮುತ್ತಲಿನ ಪರಿಸರದಲ್ಲಿ 27 ಪ್ರಬೇಧಗಳ 185 ಹಕ್ಕಿಗಳನ್ನು ಪಟ್ಟಿ ಮಾಡಿದರು. ಇದರಲ್ಲಿ ಏಶಿಯನ್ ಗ್ರೀನ್ ಬೀ ಈಟರ್ (ಸಣ್ಣ ಕಳ್ಳಿಪೀರ) ಪ್ರಬೇಧದ ಸುಮಾರು 120ಕ್ಕೂ ಹೆಚ್ಚಿನ ಹಕ್ಕಿಗಳನ್ನು ವೀಕ್ಷಣೆ ಮಾಡಲಾಯಿತು.

ವೈಟ್ ಬ್ರೊವ್ಡ್ ವ್ಯಾಗ್ಟೈಲ್ (ಕಪ್ಪು ಬಿಳಿ ಸಿಪಿಲೆ), ಗೋವಕ್ಕಿ, ಚುಕ್ಕೆ ಬೆಳವ, ಚುಕ್ಕ ರಾಟವಾಳ, ಪುಟ್ಟ ನೀರುಕಾಗೆ, ಗದ್ದೆ ಮಿಂಚುಳ್ಳಿ, ಗೊರವಂಕ, ಚಿಕ್ಕ ಬಾನಾಡಿ, ಕೆಂದಲೆ ಗಿಳಿ, ಸಣ್ಣ ಕುಟ್ರ, ಕಂಚುಕುಟಿಗ, ಕೆಮ್ಮೀಸೆ ಪಿಕಳಾರ, ಕೆಂಪು ಚಿಬ್ಬೊಟ್ಟೆಯ ಪಿಕಳಾರ, ಹೊನ್ನಕ್ಕಿ, ಕಾಜಾಣ, ರಾಜಪಕ್ಷಿ, ಮಟಪಕ್ಷಿ, ಬೂದು ಉಲಿಯಕ್ಕಿ, ನೇರಳೆ ಸೂರಕ್ಕಿ, ಗರುಡ ಸೇರಿದಂತೆ 27 ಪ್ರಬೇಧಗಳ ಹಕ್ಕಿಗಳನ್ನು ವೀಕ್ಷಿಸಲಾಯಿತು.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿ.ಎನ್.ಎಚ್.ಎಸ್) ಇದರ ಪಕ್ಷಿವಿಜ್ಞಾನದ ವಿದ್ಯಾರ್ಥಿನಿ ಮಂಜುಳಾ ಎಚ್ ಹಕ್ಕಿಗಳ ವಲಸೆ ವಿಧಗಳು, ಗೂಡು ರಚನೆಯ ಬಗ್ಗೆ ಉದಾಹರಣೆ ಸಹಿತ ವಿಸ್ತ್ರತ ಮಾಹಿತಿ ನೀಡಿದರು. ಲೇಖಕ ಕಂಚಾರ್ತಿ ರಾಜೇಶ್ವರ ಉಪಾಧ್ಯಾಯ ಹಕ್ಕಿಗಳು ಆಹಾರ ಹುಡುಕುವ ಬಗ್ಗೆ, ಗೂಡುಗಳ ರಚನೆಯ ಹಿಂದಿರುವ ಅಂಶಗಳ ಬಗ್ಗೆ ಸಂವಾದ ರೂಪದಲ್ಲಿ ಮಾಹಿತಿ ನೀಡಿದರು.

ಮನೆಯೇ ಗ್ರಂಥಾಲಯ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಲೆಸ್ಲಿ ಫರ್ನಾಂಡಿಸ್, ಗಣಪತಿ ನಾಯಕ್, ಪ್ರಸನ್ನ ಉದ್ಯಾವರ, ಕೆ. ಪ್ರೇರಣಾ ಉಪಾಧ್ಯಾಯ, ಉದಯ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಉಡುಪಿಗೆ ಬನ್ನಿ ತಂಡದ ಸದಸ್ಯ ಡಾ. ಗಣೇಶ್ ಪ್ರಸಾದ್ ಜಿ. ನಾಯಕ್ ಸ್ವಾಗತಿಸಿ ಕಾರ್ಯಕ್ರಮ ಸಂಯೋಜಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!