ಕಟಪಾಡಿ, ಜು.7: ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ (ರಿ.) ವತಿಯಿಂದ ಗುರುಪೂರ್ಣಿಮಾ ಪ್ರಯುಕ್ತ ಜುಲೈ 8 ರಿಂದ 10ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜುಲೈ 8 ಬೆಳಿಗ್ಗೆ 7.30 ರಿಂದ ಅಲಂಕಾರ ಪೂಜೆ, ಪಾದುಕಾ ಪೂಜೆ ಬೆಳಿಗ್ಗೆ 8 ರಿಂದ ಅಖಂಡ ಶ್ರೀ ಸಾಯಿ ಸಚ್ಚರಿತ್ರೆ ಪಾರಾಯಣ, ಮಧ್ಯಾಹ್ನ 12.00ಕ್ಕೆ ಆರತಿ ಬಳಿಕ ಅನ್ನಪ್ರಸಾದ, ಸಂಜೆ 6ಕ್ಕೆ ಸಚ್ಚರಿತ್ರೆ ಸಮಾಪ್ತಿ, ಸಂಜೆ 6.30ಕ್ಕೆ ಆರತಿ ಬಳಿಕ ಪಲ್ಲಕ್ಕಿ ಉತ್ಸವ. ಜುಲೈ 9 ಬೆಳಿಗ್ಗೆ 7.30 ರಿಂದ ಅಲಂಕಾರ ಪೂಜೆ, ಪಾದುಕಾ ಪೂಜೆ, ಬೆಳಿಗ್ಗೆ 9.00 ರಿಂದ ಅಖಂಡ ಶ್ರೀ ಗುರು ಚ್ಚರಿತ್ರೆ ಪಾರಾಯಣ, ಮಧ್ಯಾಹ್ನ 12.00ಕ್ಕೆ ಆರತಿ ಬಳಿಕ ಅನ್ನಪ್ರಸಾದ, ಸಂಜೆ 6 ಕ್ಕೆ ಶ್ರೀ ಗುರು ಚರಿತ್ರೆ ಸಮಾಪ್ತಿ, ಸಂಜೆ 6.30ಕ್ಕೆ ಆರತಿ ಬಳಿಕ ಪಲ್ಲಕ್ಕಿ ಉತ್ಸವ, ಜುಲೈ10 ಬೆಳಿಗ್ಗೆ 7ಕ್ಕೆ ಪಂಚಾಮೃತಾಭಿಷೇಕ, 8 ರಿಂದ ಅಲಂಕಾರ ಪೂಜೆ, ಪಾದುಕಾ ಪೂಜೆ, ಬೆಳಿಗ್ಗೆ 9.30ಕ್ಕೆ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಬವಳಾಡಿ ಇವರಿಂದ ಭಕ್ತಿ ಗಾಯನ, ಬೆಳಿಗ್ಗೆ 10.30ಕ್ಕೆ ಶಿಷ್ಯ, ಅಭಿಮಾನಿ ಭಕ್ತರಿಂದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಗೆ ಗುರುವಂದನೆ, ಮಧ್ಯಾಹ್ನ 12ಕ್ಕೆ ಆರತಿ ಬಳಿಕ ಅನ್ನಪ್ರಸಾದ, ಸಂಜೆ 4ಕ್ಕೆ ಶ್ರೀ ಸಾಯಿ ದರ್ಬಾರ್ ಹಾಗೂ ಸಾಧಕರಿಗೆ ಈಶ್ವರನುಗ್ರಹ ಗೌರವ ಪ್ರಧಾನ, ಸಂಜೆ 6.30ಕ್ಕೆ ಪಲ್ಲಕ್ಕಿ ಉತ್ಸವ, ಸಂಜೆ 7ಕ್ಕೆ ಆರತಿ ಬಳಿಕ ಪ್ರಸಾದ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರಿಗೆ ಹಾರ್ದಿಕ ಸ್ವಾಗತವನ್ನು ಆಡಳಿತ ಮಂಡಳಿ ಬಯಸಿದೆ.
ಶ್ರೀ ಕ್ಷೇತ್ರ ಶಂಕರಪುರ: ಸಾಯಿ ದರ್ಬಾರ್ 2025
ಶ್ರೀ ಕ್ಷೇತ್ರ ಶಂಕರಪುರ: ಸಾಯಿ ದರ್ಬಾರ್ 2025
Date:




By
ForthFocus™