Thursday, July 30, 2026
Thursday, July 30, 2026

ಸಮಾಜ ಸೇವಕ ರೆಂಜಾಳ ಲಕ್ಷ್ಮಣ ನಾರಾಯಣ ನಾಯಕ್ ನಿಧನ

ಸಮಾಜ ಸೇವಕ ರೆಂಜಾಳ ಲಕ್ಷ್ಮಣ ನಾರಾಯಣ ನಾಯಕ್ ನಿಧನ

Date:

ಉಡುಪಿ, ಅ.17: ಕಾರ್ಕಳದ ರೆಂಜಾಳ ನಾಯಕ್ ಕುಟುಂಬದ ಹಿರಿಯರಾದ ‘ರೆಂಜಾಳ ಲಕ್ಷ್ಮಣ ನಾರಾಯಣ ನಾಯಕ್ (76)’ ಅಕ್ಟೋಬರ್ 16 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. 55 ಕ್ಕೂ ಹೆಚ್ಚಿನ ವರ್ಷಗಳ ಕಾಲ ದಿನಸಿ ಅಂಗಡಿ, ಹೋಟೆಲ್ ಉದ್ಯಮ ಯಶಸ್ವಿಯಾಗಿ ನಡೆಸಿ “ರೆಂಜಾಳ ಲಕ್ಷ್ಮಣೇರ್” ಎಂದೇ ಜನಪ್ರಿಯರಾಗಿಯೂ, ಪ್ರಗತಿಪರ ಕೃಷಿಕಾರ್ಯದಲ್ಲಿ ಸಾಧಕರಾಗಿಯೂ, ಕುಗ್ರಾಮದಲ್ಲಿ ಆಸ್ಪತ್ರೆಯಿಲ್ಲದೆ ದೂರದ ತಾಲೂಕಿನ ದೊಡ್ಡ ಆಸ್ಪತ್ರೆಗೆ ಹೋಗಬೇಕಾದ ಕಾಲದಿಂದಲೂ ನಾಟಿ ಔಷಧಿಯನ್ನು ಅದರಲ್ಲೂ ವಿಶೇಷತಃ ಜಾಂಡಿಸ್ (ಕಾಮಾಲೆ) ರೋಗ, ಸರ್ಪಸುತ್ತಿನಂತಹ ಕಾಯಿಲೆಗೆ ದೀನ ದುರ್ಬಲರಿಗೆ ಉಚಿತವಾಗಿ ನೀಡಿ ಸಮಾಜ ಸೇವಕರಾಗಿಯೂ, ತಲೆಮಾರುಗಳಿಂದ ರೆಂಜಾಳ ಮಾರಿಗುಡಿಯಲ್ಲಿ ಸೇವಾರೂಪದಲ್ಲಿ ನಿರಂತರ ದೇವಿಯ ನಿತ್ಯಸೇವೆಯನ್ನು ನಿರಪೇಕ್ಷೆ, ನಿಸ್ವಾರ್ಥರೂಪದಲ್ಲಿ ಸಲ್ಲಿಸಿದಕ್ಕೆ ದೇವಳದ ಜೀರ್ಣೋದ್ಧಾರದ ಸಂದರ್ಭದಲ್ಲಿ ಸನ್ಮಾನಿತರಾಗಿಯೂ, ಕುಗ್ರಾಮದಲ್ಲಿ ಶಾಲೆಯೇ ಇಲ್ಲದ ಸಂದರ್ಭದಲ್ಲಿ ಮಕ್ಕಳು ಶಿಕ್ಷಣ ವಂಚಿತರಾಗಲೇಬಾರದೆಂದು ತಮ್ಮ ಸ್ವಂತ ಸ್ಥಳವನ್ನೇ ಉಚಿತವಾಗಿ ದಾನ ನೀಡಿ ಸರ್ಕಾರಿ ಅಂಗನವಾಡಿ ಕಟ್ಟಡ ಕಟ್ಟಿಸಿ ಶ್ರೇಷತೆ ಮೆರೆದಿದ್ದ ನಾಯಕರು ಪತ್ನಿ, 2 ಪುತ್ರ, ಪುತ್ರಿ, ಮೊಮ್ಮಕ್ಕಳು ಸಹಿತ ಅಪಾರ ಬಾಂಧವರನ್ನು ಅಗಲಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕ್ರೀಡಾ ಇಲಾಖೆ ವಿವಿಧ ಯೋಜನೆ: ಅರ್ಜಿ ಅವಧಿ ವಿಸ್ತರಣೆ

ಉಡುಪಿ, ಜು.30: 2025ನೇ ಸಾಲಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ...

ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ: ಅರ್ಜಿ ಆಹ್ವಾನ

ಉಡುಪಿ, ಜು.30: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ವಿಪ್ರ ಸ್ವ-ಉದ್ಯಮ...

ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ವಾರ್ಷಿಕ ಮಹಾಸಭೆ

ಕೋಟ, ಜು.30: ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ವಾರ್ಷಿಕ ಮಹಾಸಭೆಯು ಮಂಗಳವಾರ...

ಬಾರ್ಕೂರು: ‘ಸಾಹಿತ್ಯ ಮತ್ತು ಜೀವನ ದರ್ಶನ’ ವಿಶೇಷ ಉಪನ್ಯಾಸ

ಬಾರ್ಕೂರು, ಜು.30: ಶ್ರೀಮತಿ ರುಕ್ಮಿಣಿ ಶೆಟ್ಟಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ...
error: Content is protected !!