Home ಸುದ್ಧಿಗಳು ಪ್ರಾದೇಶಿಕ ಶ್ರೀ ಕಾಶಿ ಮಠಾಧೀಶರ ದಿಗ್ವಿಜಯ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ

ಶ್ರೀ ಕಾಶಿ ಮಠಾಧೀಶರ ದಿಗ್ವಿಜಯ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ

1222
0

ಉಡುಪಿ, ಅ.14: ಬೆಂಗಳೂರು ಮಲ್ಲೇಶ್ವರಂ ಶ್ರೀ ಕಾಶಿ ಮಠದಲ್ಲಿ ಶ್ರೀ ಸಂಸ್ಥಾನ ಕಾಶಿ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ‘ದಿಗ್ವಿಜಯ ಮಹೋತ್ಸವ’ ಇದೇ ನವೆಂಬರ್ 4 ರಂದು ನಡೆಯಲಿದೆ. ಉಡುಪಿಯ ಜಿ.ಎಸ್.ಬಿ ಸಮಾಜದ ಉದ್ಧಾರಕ್ಕೆ ಕಾರಣೀಭೂತರಾದ ಶ್ರೀಮದ್ ವರದೇಂದ್ರ ತೀರ್ಥ ಸ್ವಾಮೀಜಿಯವರ ಪ್ರೀತ್ಯರ್ಥವಾಗಿ ಉಡುಪಿಯಿಂದ ಬೆಂಗಳೂರಿಗೆ ವಿಶೇಷ ಯಾತ್ರೆಯನ್ನು ಜಿ.ಎಸ್‌.ಬಿ ಸಭಾ ಉಡುಪಿ ಇದರ ವತಿಯಿಂದ ಮಲ್ಲೇಶ್ವರಂ ಶ್ರೀ ಕಾಶೀ ಮಠ ವ್ಯವಸ್ಥಾಪಕ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾಗಿದೆ.

ಪ್ರಯಾಣ ದರ ಕೇವಲ ರೂ.1000/- ಒಬ್ಬರಿಗೆ (ವಸತಿ ಮತ್ತು ಆಹಾರ ಒಳಗೊಂಡಿದೆ). ನವೆಂಬರ್ 3 ರಂದು ರಾತ್ರಿ ರೈಲಿನ ಮೂಲಕ ಹೊರಟು ನವೆಂಬರ್ 4 ರಂದು ಸಂಸ್ಥಾನ ಪೂಜೆ, ದಿಗ್ವಿಜಯ ಮಹೋತ್ಸವದಲ್ಲಿ ಭಾಗಿಯಾಗಿ, ಮಹೋತ್ಸವದಲ್ಲಿ ಭಜನಾ ಇತ್ಯಾದಿಗಳನ್ನು ನಡೆಸಿ ನವೆಂಬರ್ 5 ರಂದು ಸಂಸ್ಥಾನದ ದೇವರ ವಿವಿಧ ಸೇವೆ ಹಾಗೂ ವಿಶೇಷ ಭಿಕ್ಷಾ ಸೇವೆಗಳನ್ನು ಮುಗಿಸಿ ಅಂದು ರಾತ್ರಿ ರೈಲಿನ ಮೂಲಕ ಉಡುಪಿಗೆ ತೆರಳುವುದು.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಹರಿ ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಜಿ.ಎಸ್. ಬಿ. ಸಭಾ ಉಡುಪಿ ಇದರ ವತಿಯಿಂದ ಸಮಾಜಬಾಂಧವರಲ್ಲಿ ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಅನಿರುದ್ ಪೈ- 8073342979, ಅಜಿತ್. ಪೈ-9844686494 ಸಂಪರ್ಕಿಸಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.