ಮಂಗಳೂರು, ಜೂ.30: ಸಿಒಡಿಪಿ (ರಿ) ಮಂಗಳೂರು ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣೆ ಕಾರ್ಯಕ್ರಮ ಸಿಒಡಿಪಿ ಸಭಾಂಗಣದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪೀಟರ್ ಪಾವ್ಲ್ ಸಲ್ಡಾನ್ಹಾರವರ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿತು. ಈ ವರ್ಷದಲ್ಲಿ ಸಿಒಡಿಪಿ ಸಂಸ್ಥೆಯಿಂದ 160 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ದೊರಕಿದ್ದು, ನೆರವು ಸ್ವೀಕರಿಸಿದಲ್ಲಿ ಎಲ್ಲ ಸಮುದಾಯದ ವಿದ್ಯಾರ್ಥಿಗಳಿದ್ದರು. ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ಫಾ| ವಿನ್ಸೆಂಟ್ ಡಿ ಸೋಜರವರು ಬಿಷಪ್ರವರಿಗೆ ಹೂವಿನ ಗಿಡ ನೀಡಿ ಸ್ವಾಗತಿಸಿದರು. ಬಿಷಪ್ ಪೀಟರ್ ಪೌಲ್ರವರು ಬಡವರು ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣವನ್ನು ಮುಂದುವರಿಸಲು ವಿದ್ಯಾರ್ಥಿ ವೇತನದ ಚೆಕ್ಗಳನ್ನು ವಿತರಿಸಿದರು. ಅವರಿ ಶಿಕ್ಷಣದ ಮಹತ್ವ ಮತ್ತು ಈ ಉದಾತ್ತ ಧ್ಯೇಯದಲ್ಲಿ ಧರ್ಮಪ್ರಾಂತ್ಯದ ಪಾತ್ರದ ಬಗ್ಗೆ ಮಾತನಾಡಿದರು. ಸಿಒಡಿಪಿಸ್ ಸಂಸ್ಥೆಯ ಸಹ ನಿರ್ದೇಶಕರಾದ ಫಾ| ಲೊರೆನ್ಸ್ ಕುಟಿನ್ಹಾ ಹಾಗೂ ಪೋಷಕರ ಮತ್ತು ಮಕ್ಕಳ ಪ್ರತಿನಿಧಿಗಳಾದ ಪ್ಲೋರಿನ್ ಡಿ ಸೋಜ, ಕುಮಾರಿ ಜೊವಿಟಾ ಡಿ ಕೊಸ್ಟಾ ಮತ್ತು ಲೆನ್ವಿನ್ ವಾಸ್ ವೇದಿಕೆಯಲ್ಲಿದ್ದರು.
ಸಿಒಡಿಪಿ: ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ವಿತರಣೆ
ಸಿಒಡಿಪಿ: ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ವಿತರಣೆ
Date:




By
ForthFocus™