Friday, June 5, 2026
Friday, June 5, 2026

ಸದ್ಗುರು ನಿತ್ಯಾನಂದ ಸ್ವಾಮೀಜಿ ಕುರಿತ ಅವಧೂತ ಲೀಲಾಮೃತ ಕೃತಿ ಬಿಡುಗಡೆ

ಸದ್ಗುರು ನಿತ್ಯಾನಂದ ಸ್ವಾಮೀಜಿ ಕುರಿತ ಅವಧೂತ ಲೀಲಾಮೃತ ಕೃತಿ ಬಿಡುಗಡೆ

Date:

ಬ್ರಹ್ಮಾವರ, ಆಗಸ್ಟ್ 19, 11:52 PM:

ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇವರ ಆಯೋಜನೆಯಲ್ಲಿ ಯುವ ಸಾಹಿತಿ ತಾರಾನಾಥ್ ಮೇಸ್ತ ಶಿರೂರು ಅವರು ಬರೆದಿರುವ, “ಅವಧೂತ ಲೀಲಾಮೃತ” ಶ್ರೀಸದ್ಗುರು ನಿತ್ಯಾನಂದ ಸ್ವಾಮೀಜಿ, ಗ್ರಂಥದ ಬಿಡುಗಡೆ ಕಾರ್ಯಕ್ರಮವು ಬ್ರಹ್ಮಾವರ ಇಲ್ಲಿಯ ಅಪ್ಪ ಅಮ್ಮ ಅನಾಥಾಲಯದ ಸಭಾಂಗಣದಲ್ಲಿ ಇಂದು ನಡೆಯಿತು. ಕೃತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಬಿಡುಗಡೆಗೊಳಿಸಿದರು. ನಿತ್ಯಾನಂದ ಸ್ವಾಮೀಜಿಗಳ ಕುರಿತಾಗಿರುವ ಅವಧೂತ ಲೀಲಾಮೃತ ಕೃತಿ ಎಲ್ಲರೂ ಓದಲೇಬೇಕಾದ ಅಮೂಲ್ಯ ಆಧ್ಯಾತ್ಮ ಗ್ರಂಥ. ಕಳೆದ ಅರವತ್ತು ವರ್ಷಗಳ ಹಿಂದೆ ಬಹಳಷ್ಟು ಕರಾವಳಿಗರು ಬದುಕು ಕಟ್ಟಿಕೊಳ್ಳಲು ಮುಂಬೈಗೆ ತೆರಳಿದ್ದರು. ಅಲ್ಲಿ ನಿತ್ಯಾನಂದ ಸ್ವಾಮೀಜಿಗಳಿಂದ ಅನುಗ್ರಹ ಪಡೆದು ಬದುಕಿನಲ್ಲಿ ಒಳಿತು ಪಡೆದವರು ಸಾವಿರಾರು ಮಂದಿ. ಈಗಲೂ ನಾವು ಮುಂಬೈಗೆ ಹೋದಾಗ ಅಲ್ಲಿಯ ಹೋಟೆಲು, ಅಂಗಡಿ ಮೊದಲಾದ ವಾಣಿಜ್ಯ ಉದ್ಯಮಗಳಲ್ಲಿ ಪೂಜಿಸಲ್ಪಡುವ ನಿತ್ಯಾನಂದ ಸ್ವಾಮೀಜಿಗಳ ಫೋಟಗಳು ಕಾಣಲು ಸಿಗುತ್ತವೆ ಎಂದು ಕೃತಿ ಬಿಡುಗಡೆಗೊಳಿಸಿದ ನಿತ್ಯಾನಂದ ಒಳಕಾಡು ಅವರು ಹೇಳಿದರು. ನನ್ನ ಅಜ್ಜಿ ನಿತ್ಯಾನಂದ ಸ್ವಾಮಿಗಳ ಪವಾಡಗಳನ್ನು ಉಡುಪಿಯಲ್ಲಿ ಕಂಡವರು. ಅಜ್ಜಿಯ ಆಜ್ಞೆಯಂತೆ ನಮ್ಮಮ್ಮ ನನಗೆ ನಿತ್ಯಾನಂದ ಎಂದ ನಾಮಕರಣ ಮಾಡಿದರು ಎಂದು ತನಗಿರುವ ನಿತ್ಯಾನಂದ ಹೆಸರಿನ ಗುಟ್ಟನ್ನು ಬಿಚ್ಚಿಟ್ಟರು.

ಕೊರೊನಾ ಕೋವಿಡ್-19 ಸೋಂಕು ಸಾರ್ವಜನಿಕ ವಲಯದಲ್ಲಿ ಹರಡದಂತೆ ತಡೆಯಲು ಸರಕಾರವು ಲಾಕ್ ಡೌನ್ ಅಸ್ತ್ರ ಬಳಸಿತು. ಆ ಸಂದರ್ಭ ಎತ್ತಲೂ ಹೋಗಲಾಗದೆ ಮನೆಯಲ್ಲಿ ಬಂಧಿ ಆಗಬೇಕಾದ ಪರಿಸ್ಥಿತಿ ಎದುರಾಯಿತು. ಲಾಕ್ ಡೌನ್ ಸಮಯದಲ್ಲಿ ನನ್ನಿಂದ ಅವಧೂತ ಲೀಲಾಮೃತ ಕೃತಿ ರಚಿತವಾಯಿತೆಂದು ಲೇಖಕ ತಾರಾನಾಥ್ ಮೇಸ್ತ ಶಿರೂರು ಅವರು ಪ್ರಾಸ್ತವಿಕ ಮಾತುಗಳಲ್ಲಿ ಹೇಳಿದರು. ಪುರಾಣಗಳ ಕಾಲದಿಂದಲೂ ಋಷಿ- ಮುನಿಗಳು ಸಮಾಜಕ್ಕೆ ಉಪಯುಕ್ತ ಸಂದೇಶ ನೀಡಿ ಆರೋಗ್ಯಪೂರ್ಣ ಸಮಾಜ ರೂಪಿಸಲು ಪ್ರೇರಕರಾಗಿದ್ದಾರೆ. ಇಂದು ವಿಜ್ಞಾನ ತಂತ್ರಜ್ಞಾನ ಎಷ್ಟೇ ಬೆಳೆದರೂ ಸುಖ ಶಾಂತಿ ನೆಮ್ಮದಿಯ ಬದುಕಿಗೆ ಆಧ್ಯಾತ್ಮದ ಬೆಳಕಿನ ಅಗತ್ಯವಿದೆ. ಸದ್ಗುರು ನಿತ್ಯಾನಂದ ಸ್ವಾಮೀಜಿ ಅನೇಕ ಪವಾಡಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ, ಪ್ರೇರಣೆ ನೀಡಿದ್ದಾರೆ. ಅವರ ಉಪದೇಶಾಮೃತ ಸಾರ್ವಕಾಲಿಕ ಮೌಲ್ಯ ಹೊಂದಿದ್ದು ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. ಸರ್ವಧರ್ಮಿಯರೂ ಇದರಿಂದ ಸಾರ್ಥಕ ಬದುಕಿಗೆ ಉಪಯುಕ್ತ ಮಾಹಿತಿ ಮಾರ್ಗದರ್ಶನ ಪಡೆಯಬಹುದು. ಹೀಗೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ರವಾನಿಸಿರುವ ಸಂದೇಶ ಪತ್ರವನ್ನು ಸಭೆಯಲ್ಲಿ ವಾಚಿಸಲಾಯಿತು. ಈ ಸಂದರ್ಭದಲ್ಲಿ ಅಪ್ಪ ಅಮ್ಮ ಅನಾಥಾಲಯದ ಸಂಚಾಲಕ ಪ್ರಶಾಂತ್ ಪೂಜಾರಿ ಕೂರಾಡಿ, ನಿರ್ಮಿತಿ ಕೇಂದ್ರದ ಅಭಿಜಿತ್ ಕುಮಾರ್ ಹಾಗೂ ಆಶ್ರಮವಾಸಿಗಳು ಉಪಸ್ಥಿತರಿದ್ದರು.

ನಮ್ಮ ಉಡುಪಿ ಬುಲೆಟಿನ್ ಮತ್ತು ಅವಧೂತ ಲೀಲಾಮೃತಕ್ಕೆ ಅವಿನಾಭಾವ ಸಂಬಂಧವಿದೆ. ನಮ್ಮ ಉಡುಪಿ ಬುಲೆಟಿನ್ ಆರಂಭಗೊಂಡ ಕೆಲವೇ ದಿನಗಳ ನಂತರ ಮೊಟ್ಟಮೊದಲ ಅಂಕಣವನ್ನಾಗಿ ಅವಧೂತ ಲೀಲಾಮೃತದ ಮೊದಲ ಅಧ್ಯಾಯ ಪ್ರಕಟಗೊಂಡು ಇಂದಿನ ದಿನಕ್ಕೆ 105 ಅಧ್ಯಾಯಗಳನ್ನು ಪೂರೈಸಿ ಓದುಗರ ಮೆಚ್ಚುಗೆ ಗಳಿಸಿದೆ.

© ನಮ್ಮ ಉಡುಪಿ ಬುಲೆಟಿನ್ ವರದಿ

3 COMMENTS

  1. ಅವದೂತ ಲೀಲಾಮೃತ ಕೃತಿ ಮುಂಬೈ ಯಲ್ಲಿ ಎಲ್ಲಿ ಸಿಗಬಹುದು ಸರ್ ಪ್ಲೀಸ್ ತಿಳಿಸುತ್ತೀರಾ..
    ನನ್ನ ಮೊಬೈಲ್ no
    7302777778
    ಸುರೇಶ್ ಶೆಟ್ಟಿ ನಂದಳಿಕೆ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾರ್ವಜನಿಕರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ

ಬೆಂಗಳೂರು, ಜೂ.4: ಸರ್ಕಾರದ ಎಲ್ಲಾ ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ,...

ದೇಶಪ್ರೇಮಿಗೆ ಉಸಿರಿಗಿಂತ ದೇಶ ದೊಡ್ಡದು: ಡಾ.ಸುಧಾಕರ್ ಶೆಟ್ಟಿ; ಸೇನೆಗೆ ಒಂದು ಲಕ್ಷ ರೂಪಾಯಿ ಹಸ್ತಾಂತರದ ಮೂಲಕ ಮಾಲಿಕೆ ಪ್ರಾರಂಭ

ಕಾರ್ಕಳ, ಜೂ.4: ಶಿಕ್ಷಣದ ಜೊತೆಗೆ ದೇಶಭಕ್ತಿಯನ್ನು ನಮ್ಮ ವ್ಯಕ್ತಿತ್ವದೊಂದಿಗೆ ಜೋಡಿಸಿಕೊಂಡಾಗ ರಾಷ್ಟ್ರ...

ಶಿರ್ವ: ಜೀವನೋಪಾಯ ಸೇವಾ ಕೇಂದ್ರ ಉದ್ಘಾಟನೆ

ಶಿರ್ವ, ಜೂ.೪: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ, ಜಿಲ್ಲಾ...

ಸಮಾಜ ಸೇವಕ ಗುರುದತ್ ಪ್ರಭು ಅವರಿಂದ ಪೌರ ಕಾರ್ಮಿಕರಿಗೆ ಹಣ್ಣು, ಬಟ್ಟೆ ವಿತರಣೆ

ಬೆಂಗಳೂರು, ಜೂ.4: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರದಲ್ಲಿ ಸಮಾಜ ಸೇವಕರು...
error: Content is protected !!