Home ಸುದ್ಧಿಗಳು ಪ್ರಾದೇಶಿಕ ಪ್ರಾಕೃತಿಕ ವಿಕೋಪ ಪರಿಹಾರ ಚೆಕ್ ವಿತರಣೆ

ಪ್ರಾಕೃತಿಕ ವಿಕೋಪ ಪರಿಹಾರ ಚೆಕ್ ವಿತರಣೆ

402
0

ಉಡುಪಿ: ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಉಡುಪಿ ತಾಲೂಕಿನ 11 ಕುಟುಂಬಗಳಿಗೆ ಉಡುಪಿ ಶಾಸಕರ ಕಚೇರಿಯಲ್ಲಿ ಬುಧವಾರ ಪರಿಹಾರ ಧನದ ಚೆಕ್ ನ್ನು ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.

ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಬೂದ ಶೆಟ್ಟಿಗಾರ್ ಅವರಿಗೆ ರೂ. 50,615/-, ಸುಮತಿ ನಾಯ್ಕ್ ಅವರಿಗೆ ರೂ. 49,660/-, ಕಡೆಕಾರು ಗ್ರಾಮದ ವಸಂತ ಪೂಜಾರಿ ಅವರಿಗೆ ರೂ. 30,560/-, ದಾಮೋದರ ಕೋಟ್ಯಾನ್ 43,930/- ಕೊಡವೂರು ಗ್ರಾಮದ ಸುಜಾತಾ ಅವರಿಗೆ ರೂ. 10,000/-, ಬೇಬಿ ಪೂಜಾರಿ ಅವರಿಗೆ ರೂ. 20,000/-, ಮಾಲತಿ ಅವರಿಗೆ ರೂ. 20,000/-, ವೇದಾವತಿ ಕಾಂಚನ ಅವರಿಗೆ ರೂ. 15,000/-, ಸುರೇಖಾ ಅವರಿಗೆ ರೂ. 20,000/-, ಮಲ್ಲಿಕಾ ದೇವಿ ಅವರಿಗೆ ರೂ. 20,000/-, ನಳಿನಿ ಅವರಿಗೆ ರೂ. 15,000/- ಸೇರಿದಂತೆ ಒಟ್ಟು ರೂ.2,94,765 ಮೊತ್ತದ ಚೆಕ್ ವಿತರಿಸಲಾಯಿತು.

ಉಡುಪಿ ತಹಶೀಲ್ದಾರ ಪ್ರದೀಪ್ ಕುರ್ಡೆಕರ್, ಗ್ರಾಮ ಲೆಕ್ಕಾಧಿಕಾರಿಗಳಾದ ವಾಸುದೇವ್, ಕಾರ್ತಿಕೇಯ, ನಗರಸಭಾ ಸದಸ್ಯ ಶ್ರೀಶ ಕೊಡವೂರು, ಕಡೆಕಾರ್ ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಕುತ್ಪಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.