Friday, May 15, 2026
Friday, May 15, 2026

ಎರಡನೇ ಆವೃತ್ತಿಯ ಎಸ್.ಆರ್.ಎಸ್ ಪ್ರೀಮಿಯರ್ ಲೀಗ್ 2026

ಎರಡನೇ ಆವೃತ್ತಿಯ ಎಸ್.ಆರ್.ಎಸ್ ಪ್ರೀಮಿಯರ್ ಲೀಗ್ 2026

Date:

ಬಾರಕೂರು, ಮೇ 15: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರಕೂರಿನಲ್ಲಿ ಏಪ್ರಿಲ್ 30 ರಂದು ಮಹಿಳಾ ಆಟಗಾರರನ್ನು ಸೇರಿಸಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ಎರಡನೇ ಆವೃತ್ತಿಯ ಒಂದು ದಿನದ ವಿಶಿಷ್ಟ ಕ್ರಿಕೆಟ್ ಪಂದ್ಯಾಟ ಎಸ್.ಆರ್.ಎಸ್ ಪ್ರೀಮಿಯರ್ ಲೀಗ್ 2026 ನಡೆಯಿತು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ನಡುವೆ ಸೌಹಾರ್ದತೆಯನ್ನು ಹೆಚ್ಚಿಸುವ ಉದ್ದೇಶದಿಂದ ಆಯೋಜನೆಗೊಂಡ ಈ ಕ್ರಿಕೆಟ್ ಪಂದ್ಯಾಟದಲ್ಲಿ ಕಾಲೇಜಿನ ಒಟ್ಟು 6 ತಂಡಗಳು ಭಾಗವಹಿಸಿದ್ದವು. ಉದ್ಘಾಟನಾ ಸಮಾರಂಭದಲ್ಲಿ ಮಂದಾರ್ತಿಯ ಉದ್ಯಮಿಯಾದ ಗುರುಪ್ರಸಾದ್ ಭಾಗವಹಿಸಿ ಕಾಲೇಜಿನಲ್ಲಿ ಹೊಸ ಪ್ರಾಂಶುಪಾಲರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿ, ಈ ರೀತಿಯ ಪಂದ್ಯಾವಳಿಗಳು ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವಲ್ಲಿ ವಿಶೇಷ ಪರಿಣಾಮ ಬಿರುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಪ್ರೊ. ಭಾಸ್ಕರ ಶೆಟ್ಟಿ ಎಸ್ ರವರು ಎಲ್ಲಾ ಆಟಗಾರರಿಗೆ ಶುಭಾಶಯವನ್ನು ತಿಳಿಸಿ, ಯಾವುದೇ ವಿದ್ಯಾಸಂಸ್ಥೆಯಲ್ಲಿ ನಡೆಯದ ಈ ರೀತಿಯ ವಿಶಿಷ್ಟ ಪರಿಕಲ್ಪನೆಯ ಕ್ರೀಡಾ ಸ್ಪರ್ಧೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೀವಿ ಎಂಬುದನ್ನು ನೆನಪಿಸಿದರು. ರಾಯಲ್ ಚಾಲೆಂಜರ್ಸ್ ಬಾರಕೂರು ತಂಡವು ಪ್ರಥಮ ಬಹುಮಾನವನ್ನು ಮತ್ತು ಗಲ್ಲಿ ಫ್ರೆಂಡ್ಸ್ ಬಾರಕೂರು ದ್ವಿತೀಯ ಬಹುಮಾನವನ್ನು ಪಡೆಯಿತು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಿ.ಕಾಂ ನ ದಿನೇಶ್, ಸರಣಿಶ್ರೇಷ್ಠ ಪ್ರಶಸ್ತಿಯನ್ನು ಎಂ.ಎಸ್.ಡಬ್ಲ್ಯೂನ ದರ್ಶನ್, ಅತ್ಯುತ್ತಮ ದಾಂಡಿಗ ಪ್ರಶಸ್ತಿಯನ್ನು ಪ್ರೀತಮ್, ಅತ್ಯುತ್ತಮ ಎಸೆತಗಾರ ಪ್ರಸ್ತಿಯನ್ನು ಲುಕಾಸ್ ಮತ್ತು ವಿಮೆನ್ ಎಮರ್ಜಿಂಗ್ ಪ್ಲೇಯರ್ ಪ್ರಸ್ತಿಯನ್ನು ಬಿಸಿಎ ಯ ರೂಪ ಪಡೆದುಕೊಂಡರು.

ಕ್ರೀಡಾಕೂಟದ ಸಂಪೂರ್ಣ ರೂಪರೇಷೆ ರಚಿಸಿ, ಮಾರ್ಗದರ್ಶನವನ್ನು ಸಂಯೋಜಕರಾದ ವಾಣಿಜ್ಯ ಶಾಸ್ತ್ರ ವಿಭಾಗದ ಡಾ. ರಾಧಾಕೃಷ್ಣ ನಾಯಕ ನೀಡಿದರು. ಕಾಲೇಜಿನ ಪ್ರಾಂಶುಪಾಲರನ್ನು ಒಳಗೊಂಡು, ಮಹಿಳೆಯರನ್ನೂ ಸೇರಿಸಿ ಹೆಚ್ಚಿನ ಹಿರಿಯ ಮತ್ತು ಕಿರಿಯ ಉಪನ್ಯಾಸಕರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗೋಪಾಲಪುರ ಗರಡಿಮಜಲು ರಸ್ತೆಯ ಬದಿ ನಿರಂತರವಾಗಿ ತ್ಯಾಜ್ಯ ಎಸೆಯುವ ಕಿಡಿಗೇಡಿಗಳು

ಉಡುಪಿ, ಮೇ 14: ಉಡುಪಿ ಜಿಲ್ಲೆ ಸ್ವಚ್ಛತೆಯಲ್ಲಿ ರಾಜ್ಯಮಟ್ಟದಲ್ಲೇ ಹೆಸರು ಗಳಿಸಿದೆ....

ಶ್ರೀಕೃಷ್ಣ ಮಠಕ್ಕೆ ಆನಂದ ಗುರೂಜಿ ಭೇಟಿ

ಉಡುಪಿ, ಮೇ 14: ಜೀ ಕನ್ನಡ ವಾಹಿನಿಯ ಮಹರ್ಷಿವಾಣಿ ಖ್ಯಾತಿಯ ಡಾ....

ಕಾಳಾವರ ವರದರಾಜ ಕಾಲೇಜು ವಾರ್ಷಿಕೋತ್ಸವ

ಕೋಟೇಶ್ವರ, ಮೇ 14: ದೃಢತೆಯಿಂದ ಕೂಡಿದ ಅವಿರತವಾದ ಪರಿಶ್ರಮ, ತಾಳ್ಮೆ ಮತ್ತು...

ಶ್ರೀ ಕ್ಷೇತ್ರ ಶಂಕರಪುರ: ಅನ್ನದಾಹ ಕಿಟ್ ಯೋಜನೆಗೆ ಚಾಲನೆ

ಕಟಪಾಡಿ, ಮೇ 14: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ...
error: Content is protected !!