Friday, May 29, 2026
Friday, May 29, 2026

ಅರಿವಿನ ಶಿಕ್ಷಣವನ್ನು ನಿರಾಕರಿಸಲ್ಪಟ್ಟ ಸಮುದಾಯದವರ ಬಾಳಿನ ಬೆಳಕು ಸಾವಿತ್ರಿ ಬಾಯಿ ಫುಲೆ: ಡಾ. ಮಹೇಶ್‍ ಕುಮಾರ್‍ ಕೆ.ಇ

ಅರಿವಿನ ಶಿಕ್ಷಣವನ್ನು ನಿರಾಕರಿಸಲ್ಪಟ್ಟ ಸಮುದಾಯದವರ ಬಾಳಿನ ಬೆಳಕು ಸಾವಿತ್ರಿ ಬಾಯಿ ಫುಲೆ: ಡಾ. ಮಹೇಶ್‍ ಕುಮಾರ್‍ ಕೆ.ಇ

Date:

ಮಲ್ಪೆ, ಜ.5: ಸಾಮಾಜಿಕವಾಗಿ ಅರಿವಿನ ಶಿಕ್ಷಣವನ್ನೇ ನಿರಾಕರಿಸಲ್ಪಟ್ಟ ಸಮುದಾಯಕ್ಕೆ ಶಿಕ್ಷಣ ಮುಖೇನ ಅರಿವಿನ ಬೆಳಕನ್ನು ಮೂಡಿಸಿದಂತಹ ಭಾರತದ ಮೊಟ್ಟಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ. ಮಹಿಳೆಯರ, ದೀನ ದಲಿತರ ಬದುಕಿನ ಸುಧಾರಣೆಗಾಗಿ ಅವರು ನಡೆಸಿದ ಹೋರಾಟದ ಬದುಕಿನಿಂದ ಕ್ರಾಂತಿಕಾರಿ ಭಾರತದ ಸಮಾಜ ಸುಧಾರಕಿಯಾಗಿ, ಕ್ರಾಂತಿ ಜ್ಯೋತಿಯಾಗಿ ಗುರುತಿಸಿಕೊಂಡವರು. ತಮ್ಮ ಜೀವಿತದುದ್ದಕ್ಕೂ ಲಿಂಗ ರಾಜಕಾರಣ ಜಾತಿ ರಾಜಕಾರಣದ ವಿರುದ್ಧ ಹೋರಾಡಿ ಶಿಕ್ಷಣ ಮುಖೇನ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿದ ಜ್ಯೋತಿಬಾಯಿ ಫುಲೆಯವರ ಸರಳ ಸಾತ್ವಿಕ ಬದುಕು ಎಲ್ಲರಿಗೂ ಅನುಕರಣಿಯವಾದದ್ದು ಎಂದು ಇತಿಹಾಸ ಉಪನ್ಯಾಸಕರಾದ ಡಾ. ಮಹೇಶ್‍ ಕುಮಾರ್‍ ಕೆ.ಇ ಹೇಳಿದರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಭಾಗದ ಆಶ್ರಯಲ್ಲಿ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಸಾವಿತ್ರಿಬಾಯಿ ಫುಲೆಯವರ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆಯವರ ಸಮಕಾಲೀನರಾಗಿದ್ದ ಭಾರತದ ಮೊಟ್ಟ ಮೊದಲ ಮುಸ್ಲಿಂ ಶಿಕ್ಷಕಿ ಫಾತಿಮ ಶೇಖ್ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಗೌರವಿಸಲಾಯಿತು.

ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಕೀರ್ತನಾ ಶೆಟ್ಟಿ, ಶಿವಾನಿ ಶೆಟ್ಟಿ, ಮಂಜು, ಪ್ರವೀಣ್ ಸಾವಿತ್ರಿಬಾಯಿ ಫುಲೆಯವರ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ವಹಿಸಿದ್ದರು. ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ್‌ ಭಟ್‌, ಐ.ಕ್ಯೂ.ಎ.ಸಿ ಸಂಚಾಲಕ ಡಾ. ವಿಷ್ಣುಮೂರ್ತಿ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸಂದೇಶ್‌ ಎಂ.ವಿ, ಉಪನ್ಯಾಸಕರಾದ ಶರಿತಾ, ಭಾರತಿ, ಬಾಬು ಮುಂತಾದವರು ಉಪಸ್ಥಿತರಿದ್ದರು. ಅನುಷಾ ಮತ್ತು ಬಳಗ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ರತ್ನಮಾಲಾ ಸ್ವಾಗತಿಸಿ ಪ್ರಸ್ತಾವನೆಗೈದರು. ಜ್ಯೋತಿ ಎಂ. ವಂದಿಸಿದರು. ಅರ್ಚನಾ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜ್ಞಾನಸುಧಾ ಪಿಯು ಕಾಲೇಜಿನಲ್ಲಿ ಚಿತ್ರಕಲಾ ಸ್ಪರ್ಧೆ

ಉಡುಪಿ, ಮೇ 28: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ...

ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಿ: ಟಿ. ರಘುಮೂರ್ತಿ

ಉಡುಪಿ, ಮೇ 28: ಉಡುಪಿ ನಗರ ಹಾಗೂ ಕೆಲವು ಗ್ರಾಮೀಣ ಪ್ರದೇಶಗಳಿಗೆ...

ಉಡುಪಿ ಜ್ಞಾನಸುಧಾ ಪ.ಪೂ.ಕಾಲೇಜಿನ ಪ್ರಾರಂಭೋತ್ಸವ; ಅರ್ಹ ವಿದ್ಯಾರ್ಥಿಗಳಿಗೆ 19.23 ಲಕ್ಷ ರೂ. ವಿದ್ಯಾರ್ಥಿವೇತನ

ಉಡುಪಿ, ಮೇ 28: ನಮ್ಮಲ್ಲಿರುವ ವಿಶೇಷತೆಯನ್ನು ಅರಿತು, ಜ್ಞಾನದ ಜೊತೆಗೆ ಸಾಗಬೇಕು....

ಶೇ.100 ಫಲಿತಾಂಶ ದಾಖಲಿಸಿದ ಶಾಲಾ ಕಾಲೇಜುಗಳಿಗೆ ಗೌರವಾರ್ಪಣೆ

ಉಡುಪಿ, ಮೇ 28: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಪುಷ್ಪಾನಂದ...
error: Content is protected !!