ಬೆಂಗಳೂರು, ಜು.1: ಗೃಹಜ್ಯೋತಿ ಯೋಜನೆಯ ಪುನರ್ ಪರಿಶೀಲನಾ ಕಾರ್ಯವು ಜುಲೈ 1ರಿಂದ ಆರಂಭವಾಗಲಿದೆ. ಎಲ್ಲ ಎಸ್ಕಾಂಗಳ ಮೀಟರ್ ರೀಡರ್ಗಳು ಹಾಗೂ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ, ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ, ಮೊಬೈಲ್ ಆ್ಯಪ್ ಹಾಗೂ ಘೋಷಣಾ ಪತ್ರದ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ.
ಮನೆ ಭೇಟಿ ವೇಳೆ ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
-ಆಧಾರ್ ಕಾರ್ಡ್
-ಫಲಾನುಭವಿಯ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
-ಮತದಾರರ ಗುರುತಿನ ಚೀಟಿ
-ಪಾನ್ ಕಾರ್ಡ್
-ಬಾಡಿಗೆ ಒಪ್ಪಂದದ ಪತ್ರ (ಅನ್ವಯಿಸುವಲ್ಲಿ ಮಾತ್ರ)
-ಪಡಿತರ ಚೀಟಿ
-ಜಾತಿ ಪ್ರಮಾಣ ಪತ್ರ
.




By
ForthFocus™