ಉಡುಪಿ, ಸೆ.11: ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಮಂಗಳೂರು ಪಲ್ಸ್ ಇವೆಂಟ್ ಇವರಿಂದ ದೊಡ್ಡಣಗುಡ್ಡೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ಸೆಪ್ಟೆಂಬರ್ 25, 26 ಮತ್ತು 27 ರಂದು ಬೆಳಿಗ್ಗೆ 9.30 ರಿಂದ ರಾತ್ರಿ 9.30 ರವರೆಗೆ ಸಿರಿಧಾನ್ಯ ಹಬ್ಬ ಮತ್ತು ಬೃಹತ್ ಆಹಾರ ಮೇಳ ನಡೆಯಲಿದೆ. ಪ್ರವೇಶ ಸಂಪೂರ್ಣವಾಗಿ ಉಚಿತವಾಗಿದೆ. ವಿವಿಧ ಬಗೆಯ ಸಿರಿಧಾನ್ಯಗಳ ಮಳಿಗೆಗಳು ಮತ್ತು ವಿಶೇಷವಾಗಿ ತಯಾರಿಸಿದ ರುಚಿಕರವಾದ ಸಿರಿಧಾನ್ಯ ಆಧಾರಿತ ಆಹಾರ ಪದಾರ್ಥಗಳನ್ನು ಮೇಳದಲ್ಲಿ ಲಭ್ಯ. ಸಿರಿಧಾನ್ಯಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅವುಗಳಿಂದ ಆರೋಗ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಮೇಳದ ದಿನಗಳಂದು ನಡೆಯಲಿವೆ ಎಂದು ಆಯೋಜಕರ ಪ್ರಕಟನೆ ತಿಳಿಸಿದೆ.





By
ForthFocus™