Thursday, September 3, 2026
Thursday, September 3, 2026

ಹವಾಮಾನ ಸಂಬಂಧಿತ ಮಿದುಳಿನ ಸೋಂಕುಗಳ ಕುರಿತು ಕೆಎಂಸಿ ಮಣಿಪಾಲದಲ್ಲಿ ವಿಚಾರ ಸಂಕಿರಣ

ಹವಾಮಾನ ಸಂಬಂಧಿತ ಮಿದುಳಿನ ಸೋಂಕುಗಳ ಕುರಿತು ಕೆಎಂಸಿ ಮಣಿಪಾಲದಲ್ಲಿ ವಿಚಾರ ಸಂಕಿರಣ

Date:

ಮಣಿಪಾಲ, ಆ.12: ಮಣಿಪಾಲ ಸೆಂಟರ್ ಫಾರ್ ಇನ್‌ಫೆಕ್ಷಿಯಸ್ ಡಿಸೀಸಸ್ ವತಿಯಿಂದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ (ಕೆಎಂಸಿ), ಮಣಿಪಾಲದಲ್ಲಿ ಮಿದುಳಿನ ಸೋಂಕುಗಳ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಕ್ಲಿನಿಕಲ್ ಇನ್‌ಫೆಕ್ಷಿಯಸ್ ಡಿಸೀಸಸ್ ಸೊಸೈಟಿಯ ಟ್ರಾಪಿಕಲ್ ಇನ್‌ಫೆಕ್ಷಿಯಸ್ ಡಿಸೀಸಸ್ ಉಪಸಮಿತಿ, ಕೆಎಂಸಿ ಮಣಿಪಾಲದ ಸಾಂಕ್ರಾಮಿಕ ರೋಗಗಳ ವಿಭಾಗ ಹಾಗೂ ಐಸಿಎಂಆರ್ ಕ್ಲೈಂಬ್-ಇಂಡಿಯಾ ಅಧ್ಯಯನ ತಂಡದ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು.

ಈ ವಿಚಾರ ಸಂಕಿರಣವನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು. ಇದರಿಂದ ಪ್ರತಿನಿಧಿಗಳು ಖುದ್ದಾಗಿ ಹಾಗೂ ಆನ್‌ಲೈನ್ ಮೂಲಕ ಭಾಗವಹಿಸಲು ಅವಕಾಶವಾಯಿತು. ಇದು ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ (ಎಸ್‌ಡಿಜಿ 3), ಗುಣಮಟ್ಟದ ಶಿಕ್ಷಣ (ಎಸ್‌ಡಿಜಿ 4), ಹವಾಮಾನ ಕ್ರಿಯೆ (ಎಸ್‌ಡಿಜಿ 13) ಹಾಗೂ ಗುರಿಗಳಿಗಾಗಿ ಸಹಭಾಗಿತ್ವ (ಎಸ್‌ಡಿಜಿ 17) ಎಂಬ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಪೂರಕವಾಗಿತ್ತು.

ಕೆಎಂಸಿ, ಮಾಹೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಪ್ರಾಧ್ಯಾಪಕರು ಹಾಗೂ ಘಟಕ ಮುಖ್ಯಸ್ಥರು ಮತ್ತು ಎಂಎಸಿ ಐಡಿ ಸಂಯೋಜಕರಾದ ಡಾ. ಕವಿತಾ ಸರವು ಅವರು ಪ್ರತಿನಿಧಿಗಳನ್ನು ಸ್ವಾಗತಿಸಿದರು. ಸಿಐಡಿಎಸ್ ಟ್ರಾಪಿಕಲ್ ಇನ್‌ಫೆಕ್ಷಿಯಸ್ ಡಿಸೀಸಸ್ ಉಪಸಮಿತಿಯ ಅಧ್ಯಕ್ಷರು ಹಾಗೂ ಸ್ಕಿಮ್ಸ್, ಕಾಶ್ಮೀರದ ಸಾಂಕ್ರಾಮಿಕ ರೋಗಗಳ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಪ್ರೊ. ಅಜಾಜ್ ನಬಿ ಕೌಲ್ ಅವರು ಉದ್ಘಾಟನಾ ಭಾಷಣ ಮಾಡಿದರು.

ವೈಜ್ಞಾನಿಕ ಗೋಷ್ಠಿಯಲ್ಲಿ ಮೂರು ತಜ್ಞ ಉಪನ್ಯಾಸಗಳು ನಡೆದವು. ಡಾ. ಕವಿತಾ ಸರವು ಅವರು ಭಾರತದಲ್ಲಿ ಮೆನಿಂಗೊಎನ್ಸೆಫಲೈಟಿಸ್‌ಗೆ ಚಿಕಿತ್ಸಾ ವಿಧಾನದ ಕುರಿತು ಮಾತನಾಡಿದರು. ಮಾಹೆಯ ಎಂಸಿಎಚ್‌ಪಿಯ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಕವಿತಾ ಶೆಟ್ಟಿಗಾರ್ ಅವರು ಮೆನಿಂಗೊಎನ್ಸೆಫಲೈಟಿಸ್ ಉಂಟುಮಾಡುವ ರೋಗಾಣುಗಳ ಆರಂಭಿಕ ಪತ್ತೆಗಾಗಿ ಆಣ್ವಿಕ ರೋಗನಿರ್ಣಯ ವಿಧಾನಗಳ ಕುರಿತು ಮಾತನಾಡಿದರು.

ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಮಹಾವಿದ್ಯಾಲಯದ ನರವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಏಂಜಲ್ ಮಿರಾಕ್ಲಿನ್ ಅವರು ಲಿಂಫೋಸೈಟಿಕ್ ಮೆನಿಂಜೈಟಿಸ್ ಹಾಗೂ ಕ್ಷಯರೋಗ ಮತ್ತು ಇತರ ಸಂಬಂಧಿತ ವಿಷಯಗಳ ಕುರಿತು ಮಾತನಾಡಿದರು.

ಉಪನ್ಯಾಸಗಳ ಬಳಿಕ ಮೆದುಳಿನ ಸೋಂಕುಗಳ ಮುಖ್ಯ ಪ್ರಕರಣಗಳ ಕುರಿತು ಸಂವಾದಾತ್ಮಕ ಪ್ಯಾನೆಲ್ ಚರ್ಚೆ ನಡೆಯಿತು. ಈ ಪ್ಯಾನೆಲ್‌ನಲ್ಲಿ ಡಾ. ಏಂಜಲ್ ಮಿರಾಕ್ಲಿನ್, ಕೆಎಂಸಿ ಮಣಿಪಾಲ ಕ್ಯಾಂಪಸ್‌ನ ಡಾ. ಅರವಿಂದ್ ಎನ್. ಪ್ರಭು, ಡಾ. ಮುರಳೀಧರ ವರ್ಮ, ಡಾ. ಪೃಥ್ವಿಶ್ರೀ ರವೀಂದ್ರ ಮತ್ತು ಕೆಎಂಸಿ ಮಂಗಳೂರು ಕ್ಯಾಂಪಸ್‌ನ ಡಾ. ಶರತ್ ಪಿ. ಎಸ್. ಭಾಗವಹಿಸಿದ್ದರು. ಈ ಸೋಂಕುಗಳಲ್ಲಿ ಹಲವು ನಮ್ಮ ಪ್ರದೇಶದ ಹವಾಮಾನ ಪರಿಸ್ಥಿತಿಗಳೊಂದಿಗೆ ನಿಕಟ ಸಂಬಂಧ ಹೊಂದಿವೆ ಎಂದು ಚರ್ಚೆಯ ವೇಳೆ ವಕ್ತೃಗಳು ಅಭಿಪ್ರಾಯಪಟ್ಟರು.

ಮಾತನಾಡಿದ ಡಾ. ಕವಿತಾ ಸರವು, “ಮಿದುಳಿನ ಸೋಂಕುಗಳು ಅನೇಕ ಬಾರಿ ಗಮನಕ್ಕೆ ಬಾರದೆ ಹೋಗುತ್ತವೆ ಅಥವಾ ತಡವಾಗಿ ಪತ್ತೆಯಾಗುತ್ತವೆ. ಇದರಿಂದ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ. ನಮ್ಮ ಪ್ರದೇಶದಲ್ಲಿ ಬದಲಾಗುತ್ತಿರುವ ಹವಾಮಾನ ಮತ್ತು ಮಳೆಯ ಮಾದರಿಗಳು ಇಂತಹ ಹಲವು ಸೋಂಕುಗಳ ಹರಡುವಿಕೆಯ ಮೇಲೆ ನೇರ ಪರಿಣಾಮ ಬೀರುತ್ತಿರುವುದನ್ನು ನಾವು ಈಗ ಕಾಣುತ್ತಿದ್ದೇವೆ. ಆರಂಭಿಕ ರೋಗನಿರ್ಣಯ, ಉತ್ತಮ ಪ್ರಯೋಗಾಲಯ ಬೆಂಬಲ ಹಾಗೂ ವಿವಿಧ ವಿಭಾಗಗಳ ವೈದ್ಯರು ಒಟ್ಟಾಗಿ ಕೆಲಸ ಮಾಡಿದರೆ ಅನೇಕ ಜೀವಗಳನ್ನು ಉಳಿಸಬಹುದು. ಇಂತಹ ವೇದಿಕೆಯ ಮಹತ್ವ ಇರುವುದೇ ಇದಕ್ಕಾಗಿ” ಎಂದರು.

ವಿಚಾರ ಸಂಕಿರಣಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. 50ಕ್ಕೂ ಹೆಚ್ಚು ಪ್ರತಿನಿಧಿಗಳು ಖುದ್ದಾಗಿ ಹಾಗೂ 50ಕ್ಕೂ ಹೆಚ್ಚು ಮಂದಿ ಆನ್‌ಲೈನ್ ಮೂಲಕ ಭಾಗವಹಿಸಿದರು. ಎಂಬಿಬಿಎಸ್ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ವಿವಿಧ ವಿಭಾಗಗಳ ವೈದ್ಯರು ಸಭಿಕರಲ್ಲಿದ್ದರು. ಮಿದುಳಿನ ಸೋಂಕುಗಳ ಕ್ಷೇತ್ರದಲ್ಲಿ ವಿಭಾಗಗಳ ನಡುವಿನ ಕಲಿಕೆ, ಜ್ಞಾನ ಹಂಚಿಕೆ ಹಾಗೂ ಸಹಕಾರಕ್ಕೆ ಇದು ಉತ್ತಮ ವೇದಿಕೆಯಾಯಿತು. ಅಧೀನಾ ಜೋಮನ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು, ಗೌತಮಿ ಎ. ಅವರು ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬನ್ನಂಜೆಯಲ್ಲಿ ಪಾಳುಬಿದ್ದಿರುವ ಗಾಂಧಿ ಭವನ; ಅನೈತಿಕ ಚಟುವಟಿಕೆಗಳ ಅಡ್ಡೆ; ರಕ್ಷಣೆಗೆ ಆಗ್ರಹ

ಉಡುಪಿ, ಸೆ.2: ಬನ್ನಂಜೆಯ ಡಾ. ಜಿ. ಶಂಕರ್ ರಸ್ತೆಯಲ್ಲಿ ಬರುವ, ಜಿಲ್ಲಾ...

ಸರ್ಕಾರಿ ಪದವಿಪೂರ್ವ ಕಾಲೇಜು ಕುಂದಾಪುರದ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಉಡುಪಿ, ಸೆ.2: ಹಾಲಾಡಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಖೋ...

ಸೆ. 6: ಕೇರಳ ಸಮಾಜಂ (ರಿ) ವತಿಯಿಂದ ದ್ವಿತೀಯ ವರ್ಷದ  ಅದ್ದೂರಿ ಓಣಂ ಸಂಭ್ರಮಾಚರಣೆ

ಉಡುಪಿ, ಸೆ.2: ಕೇರಳ‌ ಸಮಾಜಂ ಉಡುಪಿ (ರಿ) ವತಿಯಿಂದ ದ್ವಿತೀಯ ವರ್ಷದ...

ಪ್ರಧಾನಮಂತ್ರಿ ಆವಾಸ್ ಯೋಜನೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಉಡುಪಿ, ಸೆ.1: ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಅಡಿಯ ಸಮೀಕ್ಷೆ-2018 ರ ಶಾಶ್ವತ...
error: Content is protected !!