Tuesday, August 4, 2026
Tuesday, August 4, 2026

ಬೈಕಾಡಿ ಶ್ರೀ ಕಾಮೇಶ್ವರ ದೇವಸ್ಥಾನ: ಅರೂಢ ಪ್ರಶ್ನೆ ಚಿಂತನ ಸಂಪನ್ನ

ಬೈಕಾಡಿ ಶ್ರೀ ಕಾಮೇಶ್ವರ ದೇವಸ್ಥಾನ: ಅರೂಢ ಪ್ರಶ್ನೆ ಚಿಂತನ ಸಂಪನ್ನ

Date:

ಬ್ರಹ್ಮಾವರ, ಆ.3: ಬೈಕಾಡಿ ಶ್ರೀ ಕಾಮೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಾಗೂ ಬ್ರಹ್ಮಕಲಶದ ಪ್ರಯುಕ್ತ ಜ್ಯೋತಿಷ್ಯ ಶಿರೋಮಣಿ ಸ್ವಾಮೀನಾಥನ್ ಪಣಿಕ್ಕರ್ ಪುತ್ತೂರು ಇವರ ಮಾರ್ಗದರ್ಶನದಲ್ಲಿ ಅರೂಢ ಪ್ರಶ್ನೆ ಚಿಂತನ ಸಂಪನ್ನಗೊಂಡಿತು.

ಶ್ರೀ ದುರ್ಗೆ ಹಾಗೂ ಶ್ರೀ ಗಣಪತಿ ದೇವರ ಪ್ರತಿಷ್ಠೆ ಸಹಿತ ಗುಡಿಯ ನಿರ್ಮಾಣದ ಜೊತೆಗೆ ದೇವಸ್ಥಾನದ ಸಮಗ್ರ ಅಭಿವೃದ್ಧಿ ಅಷ್ಟಬಂಧ, ಬ್ರಹ್ಮಕಲಶ ಧಾರ್ಮಿಕ ಕಾರ್ಯಕ್ರಮಗಳಿಗೆ ಶ್ರೀ ದೇವರ ಪೂರ್ಣ ಅನುಗ್ರಹ ಇದ್ದು ಕಾರ್ಯಗಳು ಯಶಸ್ವಿಯಾಗಿ ಗ್ರಾಮರಾಷ್ಟಕ್ಕೆ ಒಳಿತು ಆಗಲಿದೆ ಎಂದು ಪ್ರಶ್ನೆ ಚಿಂತನೆಯಲ್ಲಿ ಸಾಕಾರಗೊಂಡಿತು.

ಆಡಳಿತ ಸಮಿತಿಯ ಅಧ್ಯಕ್ಷ ಹರೀಶ್ ಹೊಳ್ಳ ಅಭಿವೃದ್ಧಿ ಮತ್ತು ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಶಾಸಕರಾದ ಯಶಪಾಲ್ ಸುವರ್ಣ, ಗೌರವಾಧ್ಯಕ್ಷ ಮದಗ ಜಗಜೀವನ್ ದಾಸ್ ಶೆಟ್ಟಿ, ಅರ್ಚಕರಾದ ರಮೇಶ್ ಅಡಿಗ, ಲಕ್ಷ್ಮೀನಾರಾಯಣ ಅಡಿಗ, ಆಡಳಿತ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ ಬೈಕಾಡಿ, ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೈಕಾಡಿ ದಿನಕರ್ ಶೆಟ್ಟಿ, ರಾಘವೇಂದ್ರ ಸುವರ್ಣ, ಆಡಳಿತ ಸಮಿತಿಯ ಜಯಪ್ರಕಾಶ್ ಶೆಟ್ಟಿ, ಅಶೋಕ್ ಶೆಟ್ಟಿಗಾರ್, ಸಂತೋಷ ಪೂಜಾರಿ, ಜಯಲಕ್ಷ್ಮಿ ಶೆಟ್ಟಿ, ಪ್ರಮುಖರಾದ ಸೂರ್ಯನಾರಾಯಣ್ ರಾವ್, ನಾಗರಾಜ್ ಭಟ್, ಮಹಾಬಲೇಶ್ವರ್ ರಾವ್, ಮದಗ ಸೀತಾರಾಮ್ ಶೆಟ್ಟಿ, ಅರುಣ್ ಭಂಡಾರಿ, ಎಂ ದಿನೇಶ್ ಹೆಗ್ಡೆ, ಮಹೇಶ್ ಕುಂದರ್, ರಾಜೇಶ್ ತಿಂಗಳಾಯ, ಸುಂದರ್ ಪೂಜಾರಿ, ರಾಜೇಶ್ ಶೆಟ್ಟಿ, ಭಾಸ್ಕರ್ ಕಾಂಚನ್, ಬಿ ವಿ ರಾವ್, ರಘುರಾಮ್ ಶೆಟ್ಟಿ ರಾಮಕೃಷ್ಣ ಶೆಟ್ಟಿ, ಹರೀಶ್ ಕುಂದರ್, ಬಬ್ರುವಾಹನ ಶೆಟ್ಟಿ, ಸದಾನಂದ್ ಆಚಾರ್ಯ, ಅಜಿತ್ ಕುಮಾರ್, ರಮೇಶ್ ಭಟ್, ವಚನ್ ಹೆಗ್ಡೆ, ಹರಿಕೃಷ್ಣ ರಾವ್, ರಾಮದಾಸ್ ಹೆಗ್ಡೆ, ವಾಸುದೇವ್ ಗಾಣಿಗ, ವರದರಾಜ್ ಶೆಟ್ಟಿ, ಪ್ರಕಾಶ್ ಕುಂದರ್, ಜನಾರ್ದನ ಕುಂದರ್, ರವೀಂದ್ರ ಕೆ., ಎಚ್ ದಯಾನಂದ್ ಶೆಟ್ಟಿ, ಬಿ ಕೆ ಶೆಟ್ಟಿ, ಪ್ರದೀಪ್ ಕುಮಾರ್, ಪ್ರಶಾಂತ್ ಶೆಟ್ಟಿ, ಕೆ ಸುಧಾಕರ್, ನಾರಾಯಣ ಆಚಾರ್, ಚಂದ್ರಕಾಂತ್ ಶೆಟ್ಟಿಗಾರ್, ನಾಗರಾಜ್ ಶೆಟ್ಟಿಗಾರ್, ಆನಂದ್, ಸುಂದರ್ ಕೋಟ್ಯಾನ್, ಸುರೇಂದ್ರ ಶೆಟ್ಟಿ, ಸಂದೀಪ್ ಕುಮಾರ್, ಸುಧೀಶ್ ರೈ, ಪ್ರಜ್ವಲ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯಕ್ಷಗಾನ ಕಲಾರಂಗ: ಕಾರ್ಯಕರ್ತರ ಶ್ರೇಯೋಭಿವೃದ್ಧಿಗೆ ಪ್ರಾರ್ಥನೆ

ಉಡುಪಿ, ಆ.೩: ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಧಾರ್ಮಿಕ ಕಾರ್ಯಕ್ರಮ...

ಪುಷ್ಪಾನಂದ ಫೌಂಡೇಶನ್ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ: ಯಶ್ಪಾಲ್ ಸುವರ್ಣ

ಉಡುಪಿ, ಆ.3: ಪುಷ್ಪಾನಂದ ಫೌಂಡೇಶನ್ ವತಿಯಿಂದ 2025-2026ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ...

ಆ.6: ಮಣಿಪಾಲದ ಕಂಟ್ರಿ ಇನ್ ಹೊಟೇಲ್ ನಲ್ಲಿ ನೇರ ಸಂದರ್ಶನ

ಉಡುಪಿ, ಆ.3: ನಗರದ ಮಣಿಪಾಲ ರಜತಾದ್ರಿ ರಸ್ತೆಯ ವಿದ್ಯಾರತ್ನ ನಗರದ ಡಿ.ಸಿ...
error: Content is protected !!