ಉಡುಪಿ, ಜು.27: ಉಡುಪಿ ಜಿಲ್ಲೆಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಪೊಲೀಸ್ ಬ್ಯಾರಿಕೇಡ್ಗಳ ಮರುನವೀಕರಣ ಹಾಗೂ ಮೇಲ್ದರ್ಜೆಗೇರಿಸುವ ಕಾರ್ಯಕ್ಕೆ ಕಲ್ಕೂರ್ ರೆಫ್ರಿಜರೇಟರ್ಸ್ ಸಂಸ್ಥೆಯ ವತಿಯಿಂದ ಚಾಲನೆ ನೀಡಲಾಗಿದೆ.
ಮೊದಲ ಹಂತದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ 8 ಬ್ಯಾರಿಕೇಡ್ಗಳನ್ನು ಮರುನವೀಕರಣಗೊಳಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಐಪಿಎಸ್ ಅವರಿಗೆ ಹಸ್ತಾಂತರಿಸಲಾಯಿತು.
ಮುಂದಿನ ಎರಡು ತಿಂಗಳಲ್ಲಿ ಹಂತ ಹಂತವಾಗಿ ಬ್ಯಾರಿಕೇಡ್ಗಳನ್ನು ಮರುನವೀಕರಣಗೊಳಿಸಿ, ಮೇಲ್ದರ್ಜೆಗೇರಿಸಿ ಸಂಬಂಧಿತ ಪೊಲೀಸ್ ಠಾಣೆಗಳಿಗೆ ಹಸ್ತಾಂತರಿಸಲಾಗುವುದು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಐಪಿಎಸ್, ಕಲ್ಕೂರ್ ರೆಫ್ರಿಜರೇಟರ್ಸ್ ಸಂಸ್ಥೆಯ ಮಾಲೀಕರಾದ ರಂಜನ್ ಕಲ್ಕೂರ್ ಉಪಸ್ಥಿತರಿದ್ದರು.




By
ForthFocus™