Saturday, July 25, 2026
Saturday, July 25, 2026

ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ: ಜ್ಞಾನಸುಧಾದ 5 ವಿದ್ಯಾರ್ಥಿಗಳು ಐ.ಐ.ಟಿಗೆ ಹಾಗೂ 14 ವಿದ್ಯಾರ್ಥಿಗಳು ಎನ್.ಐ.ಟಿಗೆ ಪ್ರವೇಶ

ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ: ಜ್ಞಾನಸುಧಾದ 5 ವಿದ್ಯಾರ್ಥಿಗಳು ಐ.ಐ.ಟಿಗೆ ಹಾಗೂ 14 ವಿದ್ಯಾರ್ಥಿಗಳು ಎನ್.ಐ.ಟಿಗೆ ಪ್ರವೇಶ

Date:

ಉಡುಪಿ, ಜೂ.20: ಐ.ಐ.ಟಿ, ಎನ್.ಐ.ಟಿ ಹಾಗೂ ಐ.ಐ.ಐ.ಟಿ ಪ್ರವೇಶಕ್ಕೆ 2026-27ನೇ ಸಾಲಿನ ಕೌನ್ಸಲಿಂಗ್ ಪ್ರಕ್ರಿಯೆಯು ನಡೆಯುತ್ತಿದ್ದು, ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶದಲ್ಲಿ ಜ್ಞಾನಸುಧಾದ ೨೩ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಿಸಲು ಆಯ್ಕೆಯಾಗಿರುತ್ತಾರೆ. 5 ವಿದ್ಯಾರ್ಥಿಗಳು ಐ.ಐ.ಟಿಗೆ, 14 ವಿದ್ಯಾರ್ಥಿಗಳು ಎನ್.ಐ.ಟಿಗೆ ಹಾಗೂ ನಾಲ್ವರು ವಿದ್ಯಾರ್ಥಿಗಳು ಐ.ಐ.ಐ.ಟಿ ಪ್ರವೇಶಕ್ಕೆ ಆಯ್ಕೆಯಾಗಿರುತ್ತಾರೆ.

ಐ.ಐ.ಟಿ.ಗೆ ಆಯ್ಕೆಗೊಂಡವರು: ಶಶಾಂಕ್ ವಿ (ಐ.ಐ.ಟಿ ಬಾಂಬೆ), ತೇಜಸ್ ನಾಯಕ್ (ಐ.ಐ.ಟಿ ಭುಬನೇಶ್ವರ್), ಭರತ್ ರೆಡ್ಡಿ ವಿ (ಐ.ಐ.ಟಿ ಛತ್ತಿಸ್‌ಘಡ್), ಸಾಯಿರಾಘವೇಂದ್ರ ಬಾಲಾಜಿ ಎಸ್ (ಐ.ಐ.ಟಿ ಧಾರವಾಡ್) ಹಾಗೂ ಈಶಾಂತ್ ಪಾಟೀಲ್ ಜಿ. ಎಂ (ಐ.ಐ.ಟಿ ಧಾರವಾಡ್),

ಎನ್.ಐ.ಟಿ. ಆಯ್ಕೆಗೊಂಡವರು: ಸೋಹನ್ ಗಿರಿರೆಡ್ಡಿ (ಎನ್.ಐ.ಟಿ ಸುರತ್ಕಲ್), ನಿಶಾನ್ ಎನ್ ಸಾಲ್ಯಾನ್ (ಎನ್.ಐ.ಟಿ ಸುರತ್ಕಲ್), ಅನಿಕೇತ್ ರವಿರಾಜ್ ಉಡುಪ (ಎನ್.ಐ.ಟಿ ಸುರತ್ಕಲ್), ಮಾಧವ ಕಾಮತ್ (ಎನ್.ಐ.ಟಿ ಸುರತ್ಕಲ್), ಸಹನಾ ಎನ್ (ಎನ್.ಐ.ಟಿ ಸುರತ್ಕಲ್), ವಿದ್ವತ್ ವಿ ಕಾಮತ್ (ಎನ್.ಐ.ಟಿ ಸುರತ್ಕಲ್), ಆಸ್ತಿಕ್ ಆರ್ ಭಾಗವತ್ (ಎನ್.ಐ.ಟಿ ಸುರತ್ಕಲ್), ತುಷಾರ್ ಎ ಶೆಟ್ಟಿ ಎನ್ (ಎನ್.ಐ.ಟಿ ಒರಿಸ್ಸಾ), ಕನಿಷ್ಕ್ ಎಸ್ ಅಮೀನ್ (ಎನ್.ಐ.ಟಿ ವಾರಂಗಲ್), ವರುಣ್ ಜೆ (ಎನ್.ಐ.ಟಿ ವಾರಂಗಲ್), ಸಿದ್ಧಾಂತ್ ನಾಯ್ಕಬಾ (ಎನ್.ಐ.ಟಿ ಆಂದ್ರಪ್ರದೇಶ), ಸೌಖ್ಯತಾ ಸಿ ಎಂ (ಎನ್.ಐ.ಟಿ. ಕುರುಕ್ಷೇತ್ರ), ಅನಾಮಯ ಯೋಗೇಶ್ ದಿವಾಕರ್ (ಎನ್.ಐ.ಟಿ ಕ್ಯಾಲಿಕಟ್) ಹಾಗೂ ಎನ್.ಎಸ್.ವಿವೇಕ್ (ಎನ್.ಐ.ಟಿ. ನಾಗಪುರ್)

ಐ.ಐ.ಐ.ಟಿಗೆ ಆಯ್ಕೆಗೊಂಡವರು: ಬಿ ಅಮಿತ್ ಕಾಮತ್ (ಐ.ಐ.ಐ.ಟಿ ನಾಗಾಪುರ್), ಸೃಜನ್ ಎನ್ (ಐ.ಐ.ಐ.ಟಿ ಪುಣೆ), ಪ್ರಮಥ್ ಎಸ್ ಜೆ (ಐ.ಐ.ಐ.ಟಿ ತ್ರಿಚಿ) ಹಾಗೂ ಅನಿರುದ್ಧ್ ಕಾಮತ್ (ಐ.ಐ.ಐ.ಟಿ ಗುವಾಹಟಿ). ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!