ಕೊಡವೂರು, ಜೂ.1: ಎಪ್ಪತ್ತು ವರುಷಗಳ ಸಾರ್ಥಕ ಜೀವನವನ್ನು ನಡೆಸುತ್ತಿರುವ ಕೊಡವೂರು ಅಗ್ರಹಾರ ಲಕ್ಷ್ಮೀನಾರಾಯಣ ಭಟ್ ರವರು ಬರೆದ ಅವರ ಬದುಕಿನ ‘ನೆನಪಿನ ತೋರಣ’ ಕೃತಿಯನ್ನು ಅವರ ಭೀಮರಥೀ ಶಾಂತಿಯ ಸಂದರ್ಭದಲ್ಲಿ ವೇದಮೂರ್ತಿ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ಬಿಡುಗಡೆಗೊಳಿಸಿದರು.
ಕೃತಿಯ ಸಂಪಾದಕಿ ಪೂರ್ಣಿಮಾ ಜನಾರ್ದನ್, ಮುದ್ರಿಸಿದ ಜನಾರ್ದನ ಕೊಡವೂರು, ರಮಾ ಲಕ್ಷ್ಮಿನಾರಾಯಣ ಭಟ್, ಪ್ರಸಾದ್ ಭಟ್, ಪ್ರಸನ್ನ ಕೊಡವೂರು, ಭಾರತೀ, ರಾಜಶ್ರೀ, ಶ್ರೀವತ್ಸ, ಹಿರಣ್ಮಯಿ ಉಪಸ್ಥಿತರಿದ್ದರು.




By
ForthFocus™