ಉಡುಪಿ, ಮೇ 20: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಮಹಾರುದ್ರಯಾಗದ ಪ್ರಯುಕ್ತ ಭಕ್ತರ ಅನುಕೂಲಕ್ಕಾಗಿ ಮಾಡಿದ ಉಚಿತ ಬಸ್ ಸೇವೆ ಗಮನ ಸೆಳೆಯಿತು. ಮೇ 18 ಮತ್ತು 19ರಂದು ಎರಡು ದಿನಗಳ ಕಾಲ ಈ ವಿಶೇಷ ಸೇವೆ ಉಡುಪಿ ಹಾಗೂ ಬ್ರಹ್ಮಾವರ ಭಾಗಗಳಿಂದ ಕೊಡವೂರು ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಇದರ ಸದುಪಯೋಗ ಪಡೆದುಕೊಂಡರು. ಮಹಾರುದ್ರಯಾಗ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಗುಂಪುಗಳಾಗಿ ಬರುವ ಭಕ್ತರಿಗಾಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು.
ಕೊಡವೂರು ಮಹಾರುದ್ರಯಾಗ: ಗಮನ ಸೆಳೆದ ಉಚಿತ ಬಸ್ ಸೇವೆ
ಕೊಡವೂರು ಮಹಾರುದ್ರಯಾಗ: ಗಮನ ಸೆಳೆದ ಉಚಿತ ಬಸ್ ಸೇವೆ
Date:




By
ForthFocus™