ಉಡುಪಿ, ಮೇ 17: ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ಅಧಿಕ ಜೇಷ್ಠ ಮಾಸ ಪ್ರಯುಕ್ತ ಆಯೋಜಿಸಲಾದ ಸಾಮೂಹಿಕ ಲಕ್ಷ ಪ್ರದಕ್ಷಿಣಾ ನಮಸ್ಕಾರ ಸೇವೆಯ ಉದ್ಘಾಟನೆಯನ್ನು ಆಡಳಿತ ಮೊಕ್ತೇಸರರು ಹಾಗೂ ಮಾಜಿ ಶಾಸಕರಾದ ಕೆ. ರಘುಪತಿ ಭಟ್ ನೆರವೇರಿಸಿದರು.
ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ನಡೆದ ಋಕ್ ಸಂಹಿತಾ ಯಾಗ, ಶ್ರೀಮದ್ಭಾಗವತ ಸಪ್ತಾಹ ಹಾಗೂ 5 ಲಕ್ಷ ಸುತ್ತು ಪ್ರದಕ್ಷಿಣಾ ಕಾರ್ಯಕ್ರಮಗಳು ತಮ್ಮೆಲ್ಲರ ಸಹಕಾರದಿಂದ ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿ ಜರುಗಿದುದನ್ನು ಸ್ಮರಿಸಿಕೊಂಡ ಅವರು, ಊರ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸೇವೆಯನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಅರ್ಚಕರಾದ ಕೆ. ದಿವಾಕರ ಐತಾಳ್, ರಮೇಶ್ ಬಾರೀತ್ತಾಯ, ಜಯಶ್ರೀ ಬಾರೀತ್ತಾಯ, ಶಿಲ್ಪಾ ಆರ್. ಭಟ್, ಶ್ರೀನಿವಾಸ ಆಚಾರ್ಯ, ರಾಜೇಶ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.




By
ForthFocus™