Saturday, June 6, 2026
Saturday, June 6, 2026

ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನ: ಸಾಮೂಹಿಕ ಲಕ್ಷ ಪ್ರದಕ್ಷಿಣಾ ನಮಸ್ಕಾರ

ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನ: ಸಾಮೂಹಿಕ ಲಕ್ಷ ಪ್ರದಕ್ಷಿಣಾ ನಮಸ್ಕಾರ

Date:

ಉಡುಪಿ, ಮೇ 17: ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ಅಧಿಕ ಜೇಷ್ಠ ಮಾಸ ಪ್ರಯುಕ್ತ ಆಯೋಜಿಸಲಾದ ಸಾಮೂಹಿಕ ಲಕ್ಷ ಪ್ರದಕ್ಷಿಣಾ ನಮಸ್ಕಾರ ಸೇವೆಯ ಉದ್ಘಾಟನೆಯನ್ನು ಆಡಳಿತ ಮೊಕ್ತೇಸರರು ಹಾಗೂ ಮಾಜಿ ಶಾಸಕರಾದ ಕೆ. ರಘುಪತಿ ಭಟ್ ನೆರವೇರಿಸಿದರು.

ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ನಡೆದ ಋಕ್ ಸಂಹಿತಾ ಯಾಗ, ಶ್ರೀಮದ್ಭಾಗವತ ಸಪ್ತಾಹ ಹಾಗೂ 5 ಲಕ್ಷ ಸುತ್ತು ಪ್ರದಕ್ಷಿಣಾ ಕಾರ್ಯಕ್ರಮಗಳು ತಮ್ಮೆಲ್ಲರ ಸಹಕಾರದಿಂದ ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿ ಜರುಗಿದುದನ್ನು ಸ್ಮರಿಸಿಕೊಂಡ ಅವರು, ಊರ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸೇವೆಯನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.

ಅರ್ಚಕರಾದ ಕೆ. ದಿವಾಕರ ಐತಾಳ್, ರಮೇಶ್ ಬಾರೀತ್ತಾಯ, ಜಯಶ್ರೀ ಬಾರೀತ್ತಾಯ, ಶಿಲ್ಪಾ ಆರ್. ಭಟ್, ಶ್ರೀನಿವಾಸ ಆಚಾರ್ಯ, ರಾಜೇಶ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ ಜ್ಞಾನಸುಧಾ: ವಿಶ್ವ ಪರಿಸರ ದಿನಾಚರಣೆ

ಮಣಿಪಾಲ, ಜೂ.6: ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ರೋಟರಿ...

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ: ಅರ್ಜಿ ಆಹ್ವಾನ

ಉಡುಪಿ, ಜೂ.6: ಮೀನುಗಾರಿಕೆ ಇಲಾಖೆಯ ವತಿಯಿಂದ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ...

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಹೊಣೆ: ಎಂ.ಪುರುಷೋತ್ತಮ್

ಉಡುಪಿ, ಜೂ.6: ಮನುಷ್ಯ ಸಂಕುಲ ಉಳಿವಿಗಾಗಿ ಪ್ರಕೃತಿ ಹಾಗೂ ಜೀವ ವೈವಿಧ್ಯಗಳು...

ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ

ಕೋಟ, ಜೂ.6 ಕೋಟ ವಿವೇಕ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗದ...
error: Content is protected !!