ಕಾಪು, ಏ.19: ಕಾಪು ವಿಧಾನಸಭಾ ಕ್ಷೇತ್ರದ ಕೊಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ 1 ಕೋಟಿ 30 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆ ಹಾಗೂ ಉದ್ಘಾಟನೆಯನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
1 ಕೋಟಿ ವೆಚ್ಚದ ಓಂತಿಬೆಟ್ಟು- ಕೊಡಿಬೆಟ್ಟು – ಹಂಗಾರಕಟ್ಟೆ – ವರ್ವಾಡಿ ರಸ್ತೆಯನ್ನು ಉದ್ಘಾಟಿಸಿ ಪೆರ್ಣಂಕಿಲ ಅಂಗಾರಕಟ್ಟೆ ಹರಿಶ್ಚಂದ್ರ ಅಚಾರ್ಯ ಮನೆ ಹೋಗುವ ರಸ್ತೆ ಅಭಿವೃದ್ಧಿ – 10 ಲಕ್ಷ, ಅಂಜಾರು ಗ್ರಾಮ ಹೊಳೆಪಡ್ಪುಗೆ ಹೋಗುವ ರಸ್ತೆ ಅಭಿವೃದ್ಧಿ – 10 ಲಕ್ಷ, ಕಾಜಾರಾಗುತ್ತು ಶ್ರೀನಿವಾಸ ನಗರ 5 ಸೆಂಟ್ಸ್ ರಸ್ತೆ – 10 ಲಕ್ಷ ಸೇರಿದಂತೆ ಒಟ್ಟು 30 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಕೊಡಿಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂದೀಪ್ ಮಡಿವಾಳ ಮಾಜಿ ಸದಸ್ಯರಾದ ಅರುಣ್ ಶೆಟ್ಟಿ, ಹೆನ್ರಿ ಫರ್ನಾಂಡಿಸ್, ಜಗದೀಶ್ ಶೆಟ್ಟಿ, ರೇವತಿ ಆಚಾರ್ಯ, ವಿಜಯಲಕ್ಷ್ಮೀ, ಸ್ಥಳೀಯರಾದ ಹರಿಶ್ಚಂದ್ರ ಆಚಾರ್ಯ, ಶಶಿಕಾಂತ್ ಆಚಾರ್ಯ, ರವಿರಾಜ್ ಆಚಾರ್ಯ, ರಾಜ್ ಕುಮಾರ್ ಬೋವಿ, ರಾಜೇಶ್ ಆಚಾರ್ಯ, ಪ್ರಕಾಶ್ ಆಚಾರ್ಯ, ಗಿರೀಶ್ ನಾಯ್ಕ್, ಅನಿಲ್ ಶೆಟ್ಟಿ, ನಿತೀಶ್ ಶೆಟ್ಟಿ, ಕೃಷ್ಣ ನಾಯ್ಕ್, ಅಜಿತ್ ಶೆಟ್ಟಿ ಉಪಸ್ಥಿತರಿದ್ದರು.




By
ForthFocus™